ADVERTISEMENT

‘ಸಮಂತಾಸ್‌’ ವಸ್ತ್ರ ಪ್ರದರ್ಶನಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 17 ಜನವರಿ 2021, 17:42 IST
Last Updated 17 ಜನವರಿ 2021, 17:42 IST
ಉಪಮುಖ್ಯಮಂತ್ರಿ ಸಿ.ಎನ್.ಅಶ್ವತ್ಥನಾರಾಯಣ ಅವರು ಪ್ರದರ್ಶನದಲ್ಲಿ ವಸ್ತ್ರಗಳನ್ನು ವೀಕ್ಷಿಸಿದರು. ಸಮಂತಾಸ್ ಸಂಸ್ಥೆಯ ಇತಿ ಸಮಂತ, ಅಪರ್ಣ ಸಮಂತ, ವಿಶ್ವವಾಣಿ ಪತ್ರಿಕೆಯ ಸಂಪಾದಕ ವಿಶ್ವೇಶ್ವರ ಭಟ್‌ ಹಾಗೂ ಇತರರು ಇದ್ದರು.
ಉಪಮುಖ್ಯಮಂತ್ರಿ ಸಿ.ಎನ್.ಅಶ್ವತ್ಥನಾರಾಯಣ ಅವರು ಪ್ರದರ್ಶನದಲ್ಲಿ ವಸ್ತ್ರಗಳನ್ನು ವೀಕ್ಷಿಸಿದರು. ಸಮಂತಾಸ್ ಸಂಸ್ಥೆಯ ಇತಿ ಸಮಂತ, ಅಪರ್ಣ ಸಮಂತ, ವಿಶ್ವವಾಣಿ ಪತ್ರಿಕೆಯ ಸಂಪಾದಕ ವಿಶ್ವೇಶ್ವರ ಭಟ್‌ ಹಾಗೂ ಇತರರು ಇದ್ದರು.   

ಬೆಂಗಳೂರು:‘ಸಾಂಪ್ರದಾಯಿಕ ಹಾಗೂ ಜನಪದ ಕಲೆಗಳ ಜೊತೆಗೆ ಅತ್ಯಂತ ಮನಮೋಹಕವಾದ ಜವಳಿ ಉತ್ಪನ್ನಗಳ ತಯಾರಿಕೆಯಲ್ಲೂ ಒಡಿಶಾ ರಾಜ್ಯ ಮುಂಚೂಣಿಯಲ್ಲಿದೆ’ ಎಂದು ಉಪ ಮುಖ್ಯಮಂತ್ರಿ ಸಿ.ಎನ್.ಅಶ್ವತ್ಥನಾರಾಯಣ ತಿಳಿಸಿದರು.

ಸಮಂತಾಸ್‌ ಲಕ್ಸುರಿ ಡಿಸೈನರ್‌ ಹೌಸ್‌ ವತಿಯಿಂದ ನಗರದಲ್ಲಿ ಭಾನುವಾರ ಏರ್ಪಡಿಸಿದ್ದ ವಸ್ತ್ರ ಪ್ರದರ್ಶನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಒಡಿಶಾ ಕಳಿಂಗ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಅಚ್ಯುತ ಸಮಂತ, ಸಂಸದ ತೇಜಸ್ವಿ ಸೂರ್ಯ, ಶಿಕ್ಷಣ ತಜ್ಞ ವೂಡೇ ಪಿ.ಕೃಷ್ಣ, ಚಲನಚಿತ್ರ ನಿರ್ದೇಶಕ ಶೇಷಾದ್ರಿ ಭಾಗವಹಿಸಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.