ADVERTISEMENT

ಅಂಧರಿಗೆ, ಬಡವರಿಗೆ ಆಹಾರ ಕಿಟ್‌ ವಿತರಣೆ

​ಪ್ರಜಾವಾಣಿ ವಾರ್ತೆ
Published 19 ಮೇ 2021, 19:59 IST
Last Updated 19 ಮೇ 2021, 19:59 IST
ಅಂಧರ ಕುಟುಂಬಗಳಿಗೆ ಸಂತೋಷ್‌ಕುಮಾರ್‌ ಚಾರಿಟಬಲ್ ಟ್ರಸ್ಟ್‌ ವತಿಯಿಂದ ಉಚಿತವಾಗಿ ಪಡಿತರ ವಿತರಿಸಲಾಯಿತು
ಅಂಧರ ಕುಟುಂಬಗಳಿಗೆ ಸಂತೋಷ್‌ಕುಮಾರ್‌ ಚಾರಿಟಬಲ್ ಟ್ರಸ್ಟ್‌ ವತಿಯಿಂದ ಉಚಿತವಾಗಿ ಪಡಿತರ ವಿತರಿಸಲಾಯಿತು   

ಬೆಂಗಳೂರು: ಅಕ್ಷಯನಗರದ ಸಂತೋಷ್‌ಕುಮಾರ್ ಚಾರಿಟಬಲ್‌ ಟ್ರಸ್ಟ್‌ ವತಿಯಿಂದ ಬುಧವಾರ 185 ಕುಟುಂಬಗಳಿಗೆ ಆಹಾರ ಕಿಟ್‌ ವಿತರಿಸಲಾಯಿತು. ಈವರೆಗೆ ಟ್ರಸ್ಟ್‌ನಿಂದ 725 ಕುಟುಂಬಗಳಿಗೆ ಕಿಟ್‌ ವಿತರಿಸಲಾಗಿದೆ.

‌’ಕೋವಿಡ್‌ ಬಿಕ್ಕಟ್ಟಿನಿಂದ ಸಂಕಷ್ಟಕ್ಕೆ ಒಳಗಾದ ಕುಟುಂಬಗಳಿಗೆ ಉಚಿತವಾಗಿ ಆಹಾರ ಕಿಟ್‌ ವಿತರಿಸಲಾಗುತ್ತಿದೆ. ಅಲ್ಲದೆ, ಲಗ್ಗೆರೆಯಲ್ಲಿನ 30 ಅಂಧರ ಕುಟುಂಬಗಳಿಗೂ ಪಡಿತರ ನೀಡಲಾಯಿತು‘ ಎಂದು ಟ್ರಸ್ಟ್‌ನ ಯು. ಪ್ರಭಾಕರ್ ರಾವ್‌ ತಿಳಿಸಿದರು.

‘ಕಳೆದ ವರ್ಷದ ಲಾಕ್‌ಡೌನ್ ಸಂದರ್ಭದಲ್ಲಿಯೂ ಟ್ರಸ್ಟ್‌ನಿಂದ ಇಂತಹ ಸೇವಾ ಕಾರ್ಯ ಹಮ್ಮಿಕೊಳ್ಳಲಾಗಿತ್ತು. 1,300 ಕುಟುಂಬಗಳಿಗೆ ಪಡಿತರ ವಿತರಿಸಲಾಗಿತ್ತು‘ ಎಂದರು.

ADVERTISEMENT

’ಲಾಕ್‌ಡೌನ್‌ನಿಂದ ಉದ್ಯೋಗ ಕಳೆದುಕೊಂಡು ಆದಾಯ ಇಲ್ಲದಿರುವ ಕುಟುಂಬಗಳನ್ನು ಗುರುತಿಸಿ ಆಹಾರ ವಿತರಿಸುವ ಉದ್ದೇಶವಿದೆ. ಮುಂದಿನ ಒಂದು ವಾರದಲ್ಲಿ ಇಂತಹ 500 ಕುಟುಂಬಗಳಿಗೆ ಪಡಿತರ ನೀಡಲಾಗುವುದು‘ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.