ADVERTISEMENT

‘ಭೂಮಿ ಉಳಿಸಿ, ಭವಿಷ್ಯವನ್ನು ಉಳಿಸಿ’ ಅಭಿಯಾನ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2022, 16:21 IST
Last Updated 22 ಏಪ್ರಿಲ್ 2022, 16:21 IST
ಹಸಿರು ಉಳಿಸುವ ಸಂದೇಶ ಸಾರುವ ಫಲಕಗಳನ್ನು ನಗರದ ಪ್ರಮುಖ ವೃತ್ತಗಳ ಬಳಿ ಸ್ವಯಂಸೇವಕರು ಶುಕ್ರವಾರ ಪ್ರದರ್ಶಿಸಿದರು
ಹಸಿರು ಉಳಿಸುವ ಸಂದೇಶ ಸಾರುವ ಫಲಕಗಳನ್ನು ನಗರದ ಪ್ರಮುಖ ವೃತ್ತಗಳ ಬಳಿ ಸ್ವಯಂಸೇವಕರು ಶುಕ್ರವಾರ ಪ್ರದರ್ಶಿಸಿದರು   

ಬೆಂಗಳೂರು: ವಿಶ್ವ ಭೂದಿನದ ಅಂಗವಾಗಿ 'ನಮ್ಮ ಬೆಂಗಳೂರು ಫೌಂಡೇಷನ್‌' ಹಾಗೂ ಮೌಂಟ್‌ ಕಾರ್ಮೆಲ್‌ ಕಾಲೇಜುಗಳ ಆಶ್ರಯದಲ್ಲಿ ‘ಭೂಮಿಯನ್ನು ಉಳಿಸಿ, ನಮ್ಮ ಭವಿಷ್ಯವನ್ನು ಉಳಿಸಿ’ ಜನಜಾಗೃತಿ ಅಭಿಯಾನವು ಶುಕ್ರವಾರ ನಡೆಯಿತು.

ಪ್ರತಿಷ್ಠಾನದ ಸ್ವಯಂಸೇವಕರು, ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರು, 'ಮರಗಳನ್ನು ಉಳಿಸಿ, ಭೂಮಿ ಉಳಿಸಿ', ‘ಸೈಕಲ್‌ ಬಳಸಿ ಹಸಿರು ಉಳಿಸಿ’, 'ಪ್ಲಾಸ್ಟಿಕ್‌ ಬಳಕೆ ತಪ್ಪಿಸಿ’ ‘ಕೆರೆಗಳನ್ನು ಉಳಿಸಿ' ಮುಂತಾದ ಸಂದೇಶವನ್ನು ಹೊಂದಿದ್ದ ಫಲಕಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಪ್ರದರ್ಶಿಸಿದರು. ಸಂಚಾರದ ಸಿಗ್ನಲ್‌ಗಳಲ್ಲಿ ‘ಸಿಗ್ನಲ್‌ಗಳಲ್ಲಿ ವಾಹನದ ಎಂಜಿನ್ ಆಫ್‌ ಮಾಡಿ ಇಂಧನ ಉಳಿಸಿ’ ಎಂಬ ಸಂದೇಶ ಸಾರಿದರು.

ಸಿಗ್ನಲ್‌ಗಳಲ್ಲಿ ನಿಲ್ಲಿಸಿದ್ದ ವಾಹನ ಸವಾರರ ಬಳಿ ತೆರಳಿ ವಾಹನದ ಎಂಜಿನ್ ಅನ್ನು ಆಫ್‌ ಮಾಡುವಂತೆ ಮನವಿ ಮಾಡಿದ ಸ್ವಯಂಸೇವಕರು, ‘ಇದರಿಂದ ಇಂಧನ, ಹಣವನ್ನು ಮಾತ್ರ ಉಳಿಸುವುದಲ್ಲ. ಈ ನಡೆಯು ವಾಯುಮಾಲಿನ್ಯ ಮತ್ತು ಜಾಗತಿಕ ತಾಪಮಾನವನ್ನು ಕಡಿಮೆಗೊಳಿಸಲಿದೆ. ಪರಿಸರ ಮತ್ತು ನಮ್ಮ ಗ್ರಹವನ್ನು ಉಳಿಸುವುದಕ್ಕೂ ಕೊಡುಗೆ ನೀಡುತ್ತದೆ’ ಎಂದು ತಿಳಿಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.