ADVERTISEMENT

ಕೃಷಿಗೆ ₹1ಲಕ್ಷ ಕೋಟಿ ಪ್ರಧಾನಿಯಿಂದ ಕೃಷಿ ಕ್ರಾಂತಿ: ಎಸ್.ಟಿ.ಸೋಮಶೇಖರ್‌

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2020, 21:40 IST
Last Updated 9 ಆಗಸ್ಟ್ 2020, 21:40 IST
ಎಸ್.ಟಿ. ಸೋಮಶೇಖರ್ 
ಎಸ್.ಟಿ. ಸೋಮಶೇಖರ್    

ಬೆಂಗಳೂರು: ‘ಕೃಷಿ ಮೂಲಸೌಕರ್ಯ ನಿಧಿಗೆ ₹1 ಲಕ್ಷ ಕೋಟಿ ನೀಡುವ ಕಾರ್ಯಕ್ರಮಕ್ಕೆ ಭಾನುವಾರ ಚಾಲನೆ ನೀಡುವ ಮೂಲಕ ಪ್ರಧಾನಿ ಮೋದಿಯವರು ರೈತ ಸಮುದಾಯಕ್ಕೆ ಬಂಪರ್ ಕೊಡುಗೆ ನೀಡಿದ್ದು, ಕೃಷಿ ಕ್ರಾಂತಿಗೆ ಮುಂದಾಗಿದ್ದಾರೆ’ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್‌ ಶ್ಲಾಘಿಸಿದ್ದಾರೆ.

‘ಈಗ ಒದಗಿಸಲಾಗಿರುವ ನಿಧಿಯಿಂದ ಮುಂದಿನ ಹತ್ತು ವರ್ಷಗಳ ಅವಧಿಗೆ ರೈತರಿಗೆ ಸಾಲ ಸೇರಿದಂತೆ ಕೃಷಿ ವಲಯದ ಮೂಲಸೌಕರ್ಯಗಳ ಅಭಿವೃದ್ಧಿಗೆ ಒತ್ತು ನೀಡಲು ಸಾಧ್ಯವಿದೆ’ ಎಂದು ಅವರು ಹೇಳಿದ್ದಾರೆ.

‘ಇದೇ ವೇಳೆ, ಮೋದಿ ಅವರು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಮೂಲಕ 8.5 ಕೋಟಿ ರೈತರಿಗೆ ₹17 ಸಾವಿರ ಕೋಟಿ ಕೂಡ ವರ್ಗಾವಣೆ ಮಾಡಿದ್ದಾರೆ. ಈ ಹಣ ರೈತರ ಖಾತೆಗಳಿಗೆ ನೇರವಾಗಿ ವರ್ಗಾವಣೆಯಾಗಿದೆ’ ಎಂದು ಅವರು ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.