ADVERTISEMENT

ಸುಬ್ರಹ್ಮಣ್ಯ ಗುಡ್ಗೆ ಬಿಎಂಆರ್‌ಸಿಎಲ್‌ ನಿರ್ದೇಶಕ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2025, 14:40 IST
Last Updated 22 ನವೆಂಬರ್ 2025, 14:40 IST
ಸುಬ್ರಹ್ಮಣ್ಯ ಗುಡ್ಗೆ
ಸುಬ್ರಹ್ಮಣ್ಯ ಗುಡ್ಗೆ   

ಬೆಂಗಳೂರು: ಬಿಎಂಆರ್‌ಸಿಎಲ್‌ ಮಂಡಳಿಯ ನಿರ್ದೇಶಕರಾಗಿ (ಪ್ರಾಜೆಕ್ಟ್ ಮತ್ತು ಪ್ಲಾನಿಂಗ್‌) ಬಿಎಂಆರ್‌ಸಿಎಲ್‌ ಸುರಂಗ ಮಾರ್ಗ ವಿಭಾಗದ ಮುಖ್ಯ ಎಂಜಿನಿಯರ್‌ ಸುಬ್ರಹ್ಮಣ್ಯ ಗುಡ್ಗೆ ಅವರನ್ನು ನೇಮಕ ಮಾಡಲಾಗಿದೆ.

ಗುಡ್ಗೆ 2007ರಲ್ಲಿ ಬಿಎಂಆರ್‌ಸಿಎಲ್ ಸಂಸ್ಥೆಯಲ್ಲಿ ಉಪ ಮುಖ್ಯ ಎಂಜಿನಿಯರ್ (ಸಿವಿಲ್) ಆಗಿ ಕರ್ತವ್ಯಕ್ಕೆ ಸೇರಿದ್ದರು. ಭೂಗತ ಮೆಟ್ರೊ ಮಾರ್ಗಗಳಲ್ಲಿ ಕೆಲಸ ಮಾಡಿದ್ದಾರೆ. ನಮ್ಮ ಮೆಟ್ರೊಗೆ ಸೇರುವ ಮೊದಲು ಅವರು ಭಟ್ಕಳ ಮತ್ತು ಹೊನ್ನಾವರದಲ್ಲಿ ಪಿಎಸ್‌ಯು ಇಂಡಿಯನ್ ರೈಲ್ವೆ ಕನ್‌ಸ್ಟ್ರಕ್ಷನ್‌ ಇಂಟರ್‌ನ್ಯಾಷನಲ್‌ ಲಿಮಿಟೆಡ್ (ಐಆರ್‌ಸಿಒಎನ್) ಮತ್ತು ಕೊಂಕಣ ರೈಲ್ವೆಯಲ್ಲಿ ಕಾರ್ಯ ನಿರ್ವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT