ಬೆಂಗಳೂರು: ಪತ್ನಿಯನ್ನು ಕೊಲೆ ಗೈದ ಆರೋಪದಲ್ಲಿ ಆರೋಪಿ ಪತಿಯನ್ನು ಪುಟ್ಟೇನಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಖಲೀಂ ಶರೀಫ್ (50) ಬಂಧಿತ ಆರೋಪಿ. ಜೆ.ಪಿ ನಗರದ ಅಪಾರ್ಟ್ಮೆಂಟ್ ಸಮುಚ್ಚಯವೊಂದರಲ್ಲಿ ಪತ್ನಿ ನಜ್ನೀನ್ ಜೊತೆಗೆ ವಾಸವಿದ್ದ. ಪತ್ನಿಯ ಶೀಲ ಶಂಕಿಸಿದ್ದ ಆರೋಪಿ, ಹಣಕಾಸಿನ ವಿಚಾರವಾಗಿ ಜಗಳ ಮಾಡುತ್ತಿದ್ದ.
ಬುಧವಾರ ಬೆಳಿಗ್ಗೆ ಮಸೀದಿಯಲ್ಲಿ ಪತ್ನಿಗೆ ತಲಾಖ್ ನೀಡಿದ್ದ. ಮನೆಗೆ ವಾಪಸ್ ಬಂದ ನಂತರ ಜಗಳ ನಡೆದಿದ್ದು, ಈ ವೇಳೆ ಚಾಕುವಿನಿಂದ ಪತ್ನಿಯ ಕತ್ತು ಕೊಯ್ದು ಕೊಲೆ ಮಾಡಿದ್ದಾನೆ .
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.