ಬೆಂಗಳೂರು: ‘ರಾಜ್ಯ ಬಿಜೆಪಿ ಸರ್ಕಾರವು ‘ನಮ್ಮ ಕ್ಲಿನಿಕ್’ ಹೆಸರಿನಲ್ಲಿ ಜನರ ತೆರಿಗೆ ಹಣವನ್ನು ಲೂಟಿ ಮಾಡಲು ಮುಂದಾಗಿದೆ’ ಎಂದು ಆಮ್ ಆದ್ಮಿ ಪಕ್ಷದ (ಎಎಪಿ) ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ವಿ. ಸದಂ ಆರೋಪಿಸಿದರು.
‘ವಿಧಾನಸಭೆ ಚುನಾವಣೆಗೆ ಕೆಲವೇ ತಿಂಗಳುಗಳು ಬಾಕಿ ಇರುವಾಗ ರಾಜ್ಯ ಬಿಜೆಪಿ ಸರ್ಕಾರವು ‘ನಮ್ಮ ಕ್ಲಿನಿಕ್’ ನಿರ್ಮಿಸುತ್ತಿದೆ. ನವದೆಹಲಿಯಲ್ಲಿ ಕೇವಲ ₹ 20 ಲಕ್ಷ ವೆಚ್ಚದಲ್ಲಿ ವ್ಯವಸ್ಥಿತವಾಗಿ ‘ಮೊಹಲ್ಲಾ ಕ್ಲಿನಿಕ್’ಗಳನ್ನು ನಿರ್ಮಿಸಲಾಗಿದೆ. ರಾಜ್ಯದಲ್ಲಿ ಇದೇ ಮಾದರಿಯ ಕ್ಲಿನಿಕ್ಗಳ ನಿರ್ಮಾಣಕ್ಕೆ ತಲಾ ಒಂದು ಕೋಟಿ ರೂಪಾಯಿ ವೆಚ್ಚ ಮಾಡಲಾಗುತ್ತಿದೆ. ಇಂದಿರಾ ಕ್ಯಾಂಟೀನ್ಗಳಂತೆ ಇವು ಕೂಡ ಪಾರದರ್ಶಕತೆಗೆ ವಿರುದ್ಧವಾಗಿ ಸಾಗುತ್ತಿವೆ’ ಎಂದು ಮಂಗಳವಾರ ನಗರದಲ್ಲಿ ಸುದ್ದಿಗಾರರಿಗೆ
ತಿಳಿಸಿದರು.
‘ಮೊಹಲ್ಲಾ ಕ್ಲಿನಿಕ್ಗಳ ಬಗ್ಗೆ ಕರ್ನಾಟಕದಲ್ಲೂ ಆಸಕ್ತಿ ಇದ್ದರೆ ಅಂತಹ ಕ್ಲಿನಿಕ್ ಗಳನ್ನು ಕಡಿಮೆ ವೆಚ್ಚದಲ್ಲಿ ತೆರೆಯಲು ನಮ್ಮ ಪಕ್ಷ ರೂಪುರೇಷೆ ತಯಾರಿಸಿಕೊಡಲಿದೆ’ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.