ಬೆಂಗಳೂರು: ಕೆ.ಆರ್.ಪುರದ ಎಲೆ ಮಲ್ಲಪ್ಪ ಶೆಟ್ಟಿ ಕೆರೆಗೆ ಸಿಕ್ಕಿದ್ದೆಲ್ಲವನ್ನು ತಂದು ಸುರಿಯುತ್ತಿರುವ ಕಿಡಿಗೇಡಿಗಳು ಬುಧವಾರ ಹಳೇ ಆಟೊವನ್ನೇ ತಂದು ಹಾಕಿದ್ದಾರೆ ಎಂದು ಸ್ವಯಂಸೇವಕ ಬಾಲಾಜಿ ರಘೋತ್ತಮ ತಿಳಿಸಿದ್ದಾರೆ.
‘ಸತ್ತ ದನಗಳನ್ನು, ಕಸವನ್ನು, ಕಟ್ಟಡದ ಅವಶೇಷಗಳನ್ನೆಲ್ಲ ಕೆರೆಗೆ ತಂದು ಹಾಕುತ್ತಿದ್ದಾರೆ. ನಾನು ಕೆರೆ ಸಂರಕ್ಷಣಾ ಸದಸ್ಯನಾಗಿ ಕೆಲಸ ಮಾಡುತ್ತಿದ್ದು, ಬುಧವಾರ ಕೆರೆ ಬಳಿ ತೆರಳಿದಾಗ ಆಟೊ ಕಂಡು ಬಂದಿದೆ’ ಎಂದು ಅವರು ಮಾಹಿತಿ ನೀಡಿದ್ದಾರೆ.
‘ಕೆರೆ ಸ್ವಚ್ಛವಾಗಿ ಇಟ್ಟುಕೊಳ್ಳಲು ಅಡ್ಡಿಪಡಿಸುವವರನ್ನು ಬಿಬಿಎಂಪಿ ಅಧಿಕಾರಿಗಳು ಪತ್ತೆ ಮಾಡಿ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.