ADVERTISEMENT

ಹನಿಟ್ರ್ಯಾಪ್‍ನಿಂದ ಶ್ರೀಮಂತರ ಸುಲಿಗೆ: ಗ್ಯಾಂಗ್ ಬಂಧನ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2020, 20:08 IST
Last Updated 28 ಅಕ್ಟೋಬರ್ 2020, 20:08 IST

ಬೆಂಗಳೂರು: ಹನಿಟ್ರ್ಯಾಪ್ ಮೂಲಕ ಶ್ರೀಮಂತ ವ್ಯಕ್ತಿಗಳನ್ನು ಸುಲಿಗೆ ಮಾಡುತ್ತಿದ್ದ ಏಳು ಆರೋಪಿಗಳ ತಂಡವನ್ನು ಮಹದೇವಪುರ ಪೊಲೀಸರು ಬಂಧಿಸಿದ್ದಾರೆ.

ಉದಯನಗರ ನಿವಾಸಿ ದೀಪಕ್ (26), ಶಕ್ತಿನಗರದ ಅಂಜಲಿ (31), ಉದಯನಗರದ ಟೈಸನ್ (23), ಪೈ ಲೇಔಟ್‍ನ ಪ್ರಕಾಶ್(20), ಪ್ರೇಮನಾಥ್ (32), ಉದಯನಗರದ ವಿನೋದ (43) ಹಾಗೂ ಕಮ್ಮನಹಳ್ಳಿಯ ಈಶ್ವರಿ (40) ಬಂಧಿತರು.

ಪೈ ಬಡಾವಣೆಯಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಈ ತಂಡ, ಶ್ರೀಮಂತರನ್ನು ಮನೆಗೆ ಆಹ್ವಾನಿಸಿ, ಹನಿಟ್ರ್ಯಾಪ್ ಮಾಡುತ್ತಿತ್ತು.

ADVERTISEMENT

ಹನಿಟ್ರ್ಯಾಪ್‍ಗೆ ಒಳಗಾಗಿದ್ದ ವ್ಯಕ್ತಿಯೊಬ್ಬರು ನೀಡಿದ್ದ ದೂರಿನ ಮೇರೆಗೆ ಪೊಲೀಸರು ದಾಳಿ ನಡೆಸಿದ್ದರು. ಬಂಧಿತರಿಂದ 40 ಗ್ರಾಂ ಚಿನ್ನದ ಬ್ರೇಸ್‍ಲೆಟ್, 2 ಸ್ಮಾರ್ಟ್‍ಫೋನ್ ವಶಕ್ಕೆ ಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.