ADVERTISEMENT

ಕಾರ್ಯಕರ್ತನಿಗೆ ಹೊಡೆದ ಮಾಜಿ ಶಾಸಕ ಸುರೇಶ್‌ಗೌಡ

​ಪ್ರಜಾವಾಣಿ ವಾರ್ತೆ
Published 23 ಮೇ 2022, 2:51 IST
Last Updated 23 ಮೇ 2022, 2:51 IST

ತುಮಕೂರು: ಜೈಕಾರ ಹಾಕಿದ ಕಾರ್ಯಕರ್ತನಿಗೆ ಮಾಜಿ ಶಾಸಕ ಸುರೇಶ್‌ಗೌಡ ಹೊಡೆದ ಘಟನೆ ತಾಲ್ಲೂಕು ಬಳಗೆರೆಯಲ್ಲಿ ಶನಿವಾರ ಸಂಜೆ ನಡೆದಿದೆ.

ಗ್ರಾಮದ ದೇವರ ಉತ್ಸವ ಕಾರ್ಯಕ್ರಮದಲ್ಲಿ ಭಕ್ತರಿಗೆ ದಾಸೋಹ ಆಯೋಜಿಸಲಾಗಿತ್ತು. ಊಟದ ಪಂಕ್ತಿಯಲ್ಲಿನ ಜನರನ್ನು ಸುರೇಶ್ ಗೌಡ ಮಾತನಾಡಿಸುತ್ತಿದ್ದರು. ವೇಳೆ ಹಿಂದೆ ಬರುತ್ತಿದ್ದ ಕಾರ್ಯಕರ್ತನೊಬ್ಬ ಜೋರು ಧ್ವನಿಯಲ್ಲಿ ಜೈಕಾರ ಕೂಗಿದ್ದಕ್ಕೆ ಸಿಟ್ಟಿಗೆದ್ದ ಸುರೇಶ್‌ಗೌಡ ಕಾರ್ಯಕರ್ತನ ಹೊಟ್ಟೆ ಮೇಲೆ ಹೊಡೆದು ಜೈಕಾರ ಕೂಗಬೇಡ ಎಂದಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT