ಬೆಂಗಳೂರು: ನಗರದಲ್ಲಿ ಸೋಮವಾರ ತಡರಾತ್ರಿ ಇಬ್ಬರು ಚಾಲಕರನ್ನು ಕೊಲೆ ಮಾಡಲಾಗಿದೆ.
ಗದಗಿನ ಹನುಮಂತೇಗೌಡ (30)ಹಾಗೂ ಹಾಸನದ ಮೋಹನ್ ಕುಮಾರ್ (29) ಕೊಲೆಯಾದವರು.
‘ದೊಡ್ಡಬಿದರಕಲ್ಲು ಸಮೀಪದ ಮುನೇಶ್ವರ ಬ್ಲಾಕ್ನಲ್ಲಿ ವಾಸವಿದ್ದ ಹನುಮಂತೇಗೌಡ, ಸ್ಥಳೀಯ ಶಾಲೆಯೊಂದರ ಬಸ್ ಚಾಲಕರಾಗಿ ಕೆಲಸ ಮಾಡುತ್ತಿದ್ದರು. ದುಷ್ಕರ್ಮಿಗಳು, ಅವರ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾರೆ’ ಎಂದು ಪೀಣ್ಯ ಪೊಲೀಸರು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.