ADVERTISEMENT

ವಚನಗಳಿಂದ ಬದುಕು ನಿರ್ಮಾಣ: ಪಿನಾಕಪಾಣಿ

​ಪ್ರಜಾವಾಣಿ ವಾರ್ತೆ
Published 26 ಜೂನ್ 2021, 5:05 IST
Last Updated 26 ಜೂನ್ 2021, 5:05 IST
ವಿದ್ಯಾರ್ಥಿಗಳಿಗೆ ಕಾರ್ಯಕ್ರಮದಲ್ಲಿ ಪ್ರಮಾಣಪತ್ರ ವಿತರಿಸಲಾಯಿತು. ಎಸ್. ಪಿನಾಕಪಾಣಿ, ಪಂ.ಈರಯ್ಯ ಚಿಕ್ಕಮಠ, ಬಸವ ಸೇನಾನಿ ಶಿವಕುಮಾರಸ್ವಾಮಿ, ಯೋಗಾಚಾರ್ಯ ಅಣ್ಣಪ್ಪ, ತಂತ್ರಜ್ಞ ರಾಜಾ ಗುರುಪ್ರಸಾದ್, ಕೇಶವಮೂರ್ತಿ ಹಾಗೂ ಇತರರು ಇದ್ದರು.
ವಿದ್ಯಾರ್ಥಿಗಳಿಗೆ ಕಾರ್ಯಕ್ರಮದಲ್ಲಿ ಪ್ರಮಾಣಪತ್ರ ವಿತರಿಸಲಾಯಿತು. ಎಸ್. ಪಿನಾಕಪಾಣಿ, ಪಂ.ಈರಯ್ಯ ಚಿಕ್ಕಮಠ, ಬಸವ ಸೇನಾನಿ ಶಿವಕುಮಾರಸ್ವಾಮಿ, ಯೋಗಾಚಾರ್ಯ ಅಣ್ಣಪ್ಪ, ತಂತ್ರಜ್ಞ ರಾಜಾ ಗುರುಪ್ರಸಾದ್, ಕೇಶವಮೂರ್ತಿ ಹಾಗೂ ಇತರರು ಇದ್ದರು.   

ಬೆಂಗಳೂರು: ‘ಜ್ಞಾನದ ಬೆಳಕಾದ ವಚನಗಳಿಂದ ಸುಂದರ ಬದುಕು ನಿರ್ಮಾಣವಾಗುತ್ತದೆ. ವಚನ ಯಾನ ಗಾನದಿಂದ ಮನಸ್ಸು ನಿರಾಳಗೊಳ್ಳುತ್ತದೆ’ ಎಂದು ವಚನಜ್ಯೋತಿ ಬಳಗದ ಅಧ್ಯಕ್ಷ ಪಿನಾಕಪಾಣಿ ತಿಳಿಸಿದರು.

ಹಂಪಿನಗರದಲ್ಲಿ ನಡೆದ ಪ್ರಪುಣ್ಯ ಸಂಗೀತ ವಿದ್ಯಾಲಯದ ವಚನ ಗಾಯನ ಕಲಿಕಾ ಶಿಬಿರದ ಸಮಾರೋಪ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಬಸವ ಸೇನಾನಿ ಶಿವಕುಮಾರಸ್ವಾಮಿ, ಪ್ರಪುಣ್ಯ ಸಂಗೀತ ವಿದ್ಯಾಲಯದ ಪಂ.ಈರಯ್ಯ ಚಿಕ್ಕಮಠ ಇದ್ದರು.

ADVERTISEMENT

ವಿದ್ಯಾರ್ಥಿಗಳಾದ ಪೂರ್ಣಿಕಾ, ನಿಸರ್ಗ, ಶ್ರೇಯಸ್, ಅಕ್ಷತಾ ಕಾರಂತ್ ಹಾಗೂ ಭಾಗ್ಯ, ಸುಜಾತ, ಮುನಿರತ್ನಂ, ಉಮಾಪತಿ ವಚನಗಳನ್ನು ಹಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.