ADVERTISEMENT

ವರ್ಬ್ಯಾಟಲ್ ಚರ್ಚಾ ಸ್ಪರ್ಧೆಗೆ ತೆರೆ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2018, 19:44 IST
Last Updated 10 ಆಗಸ್ಟ್ 2018, 19:44 IST

ಬೆಂಗಳೂರು: ವರ್ಬ್ಯಾಟಲ್ ಫೌಂಡೇಷನ್ ಆಯೋಜಿಸಿರುವ 14ನೇ ರಾಜ್ಯ ಮಟ್ಟದ ಅಂತರ ಶಾಲಾ ಮತ್ತು ಕಾಲೇಜು ಮಟ್ಟದ ಚರ್ಚಾ ಸ್ಪರ್ಧೆಯ ಫೈನಲ್‌ ಸುತ್ತು ಕೆ.ಆರ್‌.ಪುರದ ಗಾರ್ಡನ್ ಸಿಟಿ ಕಾಲೇಜಿನಲ್ಲಿ ಶುಕ್ರವಾರ ನಡೆದಿದೆ.

ಹುಬ್ಬಳ್ಳಿ, ಧಾರವಾಡ, ರಾಯಪುರ, ಬೆಳಗಾವಿ, ಗದಗ, ಮಂಗಳೂರು, ಉಡುಪಿ, ಮಣಿಪಾಲ್‌, ಮೂಡಬಿದ್ರೆ, ಶಿರಸಿ, ತಿಪಟೂರು, ಮೈಸೂರು ಮತ್ತು ಬೆಂಗಳೂರಿನ 650ಕ್ಕೂ ಹೆಚ್ಚು ಮಕ್ಕಳು ಈ ಬಾರಿ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ಇದರಲ್ಲಿ 24 ವಿದ್ಯಾರ್ಥಿಗಳ 12 ತಂಡಗಳು ಅಂತಿಮ ಸುತ್ತಿನಲ್ಲಿದ್ದವು.

ವಿಜೇತ ತಂಡಕ್ಕೆ ₹ 30 ಸಾವಿರ, ಅಂತಿಮ ಸುತ್ತಿಗೆ ಆಯ್ಕೆಯಾದವರಿಗೆ ₹5 ಸಾವಿರ ನಗದು ಬಹುಮಾನ ನೀಡಲಾಯಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.