ಬೆಂಗಳೂರು: ಮತದಾನದ ಬಗ್ಗೆ ಪ್ರಯಾಣಿಕರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಚಾಲಕರೊಬ್ಬರು ಸದ್ದಿಲ್ಲದೆ ಮಾಡುತ್ತಿದ್ದಾರೆ.
ಘಟಕ–33ರ ಚಾಲಕ–ನಿರ್ವಾಹಕ ಯೋಗೇಶ್ಗೌಡ ಅವರು ಕರಪತ್ರ ಮುದ್ರಿಸಿಕೊಂಡು ಪ್ರಯಾಣಿಕರಿಗೆ ಹಂಚುತ್ತಿದ್ದು, ಮತದಾನದ ಮಹತ್ವವನ್ನೂ ತಿಳಿಸುತ್ತಿದ್ದಾರೆ.
‘ಮರೆಯದಿರಿ ಮತದಾನ; ಮರೆತರೆ ಬದುಕಿಗಿಲ್ಲ ಸ್ಥಾನಮಾನ, ಮತದಾನ ಮಾಡದೆ ಕಳೆದರೆ ರಜೆ; ಇನ್ನೈದು ವರ್ಷ ಸ್ವಾಭಿಮಾನಕ್ಕೆ ಸಜೆ’ ಎಂಬಿತ್ಯಾದಿ ಘೋಷಣೆಗಳನ್ನು ಸಿದ್ಧಪಡಿಸಿ ಕರಪತ್ರ ಮುದ್ರಿಸಿಕೊಂಡಿದ್ದಾರೆ. ಬಸ್ಗೆ ಹತ್ತುವ ಪ್ರಯಾಣಿಕರಿಗೆ ವಿತರಿಸುತ್ತಿದ್ದಾರೆ.
ಯಾರೊಬ್ಬರೂ ಮತದಾನದಿಂದ ಹೊರಗುಳಿಯಬಾರದು ಎಂಬ ಉದ್ದೇಶದಿಂದ ಈ ಕೆಲಸ ಮಾಡುತ್ತಿರುವುದಾಗಿ ಯೋಗೇಶ್ಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.