ADVERTISEMENT

ಜನರಲ್ಲಿನ ತಪ್ಪುಕಲ್ಪನೆ ಹೋಗಲಾಡಿಸಲು ಅಭಿಯಾನ: 28ಕ್ಕೆ ನಿಮ್ಹಾನ್ಸ್‌ನಲ್ಲಿ ನಡಿಗೆ

​ಪ್ರಜಾವಾಣಿ ವಾರ್ತೆ
Published 4 ಜೂನ್ 2025, 23:30 IST
Last Updated 4 ಜೂನ್ 2025, 23:30 IST
<div class="paragraphs"><p>ನಿಮ್ಹಾನ್ಸ್</p></div>

ನಿಮ್ಹಾನ್ಸ್

   

ಬೆಂಗಳೂರು: ಮಾನಸಿಕ ಆರೋಗ್ಯ ಹಾಗೂ ರೋಗಿಗಳ ಬಗ್ಗೆ ಇರುವ ತಪ್ಪು ಕಲ್ಪನೆಗಳನ್ನು ಹೋಗಲಾಡಿಸಲು ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆಯು (ನಿಮ್ಹಾನ್ಸ್‌) ಇದೇ 28ಕ್ಕೆ ‘ವಾಕಿಂಗ್‌ ಟೂರ್‌ ಆಫ್ ನಿಮ್ಹಾನ್ಸ್’ ಅಭಿಯಾನ ಹಮ್ಮಿಕೊಂಡಿದೆ.

ಬೆಳಿಗ್ಗೆ 8.45ಕ್ಕೆ ಸಂಸ್ಥೆಯ ಡಾ.ಎಂ.ವಿ. ಗೋವಿಂದಸ್ವಾಮಿ ಕೇಂದ್ರದಲ್ಲಿ ನಡಿಗೆ ಪ್ರಾರಂಭವಾಗಲಿದೆ. 300 ಎಕರೆ ವಿಸ್ತೀ‌ರ್ಣ ಹೊಂದಿರುವ ನಿಮ್ಹಾನ್ಸ್ ಕ್ಯಾಂಪಸ್‌ನ ವಿಶೇಷತೆಗಳನ್ನು ಸಂಸ್ಥೆಯ ವೈದ್ಯರು ಪರಿಚಯ ಮಾಡಿಸಲಿದ್ದಾರೆ. ಸಂಸ್ಥೆಯು 2019ರಿಂದ ಈ ಅಭಿಯಾನ ನಡೆಸುತ್ತಿದೆ.

ADVERTISEMENT

ಮಾನಸಿಕ ರೋಗಿಗಳ ಸಾಮಾನ್ಯ ವಾರ್ಡ್, ವಿಶೇಷ ವಾರ್ಡ್‌ಗಳನ್ನು ವೀಕ್ಷಿಸಬಹುದು. ವೈದ್ಯರು, ರೋಗಿಗಳ ಜೊತೆಗೆ ಸಮಾಲೋಚನೆ ನಡೆಸಬಹುದು. ಚಿಕಿತ್ಸೆ ಕುರಿತು ಮಾಹಿತಿ ಪಡೆಯ ಬಹುದಾಗಿದೆ. ಮಾನಸಿಕ ರೋಗಿಗಳ ಪುನರ್ವಸತಿ ಕೇಂದ್ರ, ಚಿಕಿತ್ಸಾ ವಿಭಾಗ, ಮ್ಯೂಸಿಯಂ, ಯೋಗ ಸೇರಿದಂತೆ ವಿವಿಧ ಕೇಂದ್ರಗಳ ಪರಿಚಯ ಮಾಡಿಕೊಡಲಾಗುವುದು ಎಂದು ಸಂಸ್ಥೆ ತಿಳಿಸಿದೆ.

‘ಮಾನಸಿಕ ಅಸ್ವಸ್ಥತೆಯಿಂದ ಬಳಲುವ ಜನರನ್ನು ಮೊದಲಿನಿಂದಲೂ ದೇಶದಲ್ಲಿ ಕಳಂಕಿತರಂತೆ ನೋಡಲಾಗುತ್ತಿದೆ. ಇದಕ್ಕೆ ಅರಿವಿನ ಕೊರತೆಯೇ ಮುಖ್ಯ ಕಾರಣ. ಆದ್ದರಿಂದ ಈ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ಸೀಮಿತ ಜನರಿಗೆ ಮಾತ್ರ ಅವಕಾಶ ಇರಲಿದ್ದು, ಹೆಸರು ನೋಂದಣಿಗೆ ಇದೇ 16 ಕಡೆಯ ದಿನಾಂಕವಾಗಿದೆ. ನೋಂದಣಿ ಶುಲ್ಕ ₹500 ನಿಗದಿಪಡಿಸಲಾಗಿದೆ’ ಎಂದು ಸಂಸ್ಥೆ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ. 

ದೂರವಾಣಿ ಸಂಪರ್ಕಕ್ಕೆ: 080 26995156

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.