ADVERTISEMENT

Bengaluru Rains: ಗ್ರೀನ್ ಪ್ಯಾರಡೈಸ್ ಬಡಾವಣೆಗೆ ಜಲ ಕಂಟಕ

​ಪ್ರಜಾವಾಣಿ ವಾರ್ತೆ
Published 20 ಮೇ 2025, 20:47 IST
Last Updated 20 ಮೇ 2025, 20:47 IST
ಕಿತ್ತಗನೂರಿನ ಗ್ರೀನ್ ಪ್ಯಾರಡೈಸ್ ಬಡಾವಣೆ ಜಲಾವೃತಗೊಂಡಿರುವುದು
ಕಿತ್ತಗನೂರಿನ ಗ್ರೀನ್ ಪ್ಯಾರಡೈಸ್ ಬಡಾವಣೆ ಜಲಾವೃತಗೊಂಡಿರುವುದು   

ಕೆ.ಆರ್.ಪುರ: ಮಹದೇವಪುರ ಕ್ಷೇತ್ರದ ಕಿತ್ತಗನೂರಿನ ಗ್ರೀನ್ ಪ್ಯಾರಡೈಸ್ ಬಡಾವಣೆಯ 20ಕ್ಕೂ ಹೆಚ್ಚು ಮನೆಗಳು ಜಲಾವೃತಗೊಂಡಿವೆ.  ‌

ಕಿತ್ತಗನೂರು ಮೂಲಕ ಬಿದರಹಳ್ಳಿ ಕಡೆಗೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆಗೆ ಹೊಂದಿಕೊಂಡಿರುವ ರಾಜಕಾಲುವೆಗೆ ಸೇತುವೆ ನಿರ್ಮಿಸದ ಕಾರಣ, ಎಲೆಮಲ್ಲಪ್ಪಶೆಟ್ಟಿ ಕೆರೆಗೆ ಸಂಪರ್ಕ ಕಲ್ಪಿಸುವ ರಾಜಕಾಲುವೆಯ ನೀರು ಬಡಾವಣೆಯ ಮನೆಗಳಿಗೆ ನುಗ್ಗಿದೆ.

ರಾಂಪುರ ಕೆರೆ ತುಂಬಿ ಹರಿದು ಪಕ್ಕದ ಗ್ರೀನ್ ಪ್ಯಾರಡೈಸ್ ಬಡಾವಣೆ ಜಲಾವೃತಗಗೊಂಡಿದ್ದು, ನಿವಾಸಿಗಳು ಹೊರಬರಲು ಪರದಾಡುವಂತಾಗಿದೆ.  

ADVERTISEMENT

‘ರಾಜಕಾಲುವೆಗೆ ಸೇತುವೆ ನಿರ್ಮಾಣ ಮಾಡದೆ ಇರುವುದರಿಂದ ಪ್ರತಿ ವರ್ಷ ಸಮಸ್ಯೆ ಆಗುತ್ತಿದೆ.  ರಾಜಕಾಲುವೆ ನೀರು ಮನೆಗಳಿಗೆ ನುಗ್ಗಿದ್ದು, ವಿಷ ಜಂತುಗಳು ಸೇರಿವೆ. ಊಟ, ನೀರು ಇಲ್ಲದೆ ತೊಂದರೆ ಅನುಭವಿಸಿದ್ದೇವೆ’ ಎಂದು ಬಡಾವಣೆ ನಿವಾಸಿಗಳು ದೂರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.