ADVERTISEMENT

ಪ್ರಕಾಶ್‌ ರಾಜ್‌ರನ್ನು ಗೆಲ್ಲಿಸುವ ಅಗತ್ಯವಿದೆ: ಯೋಗೇಂದ್ರ ಯಾದವ್‌

ಸ್ವರಾಜ್‌ ಇಂಡಿಯಾದ ಅಧ್ಯಕ್ಷ

​ಪ್ರಜಾವಾಣಿ ವಾರ್ತೆ
Published 3 ಮೇ 2019, 14:19 IST
Last Updated 3 ಮೇ 2019, 14:19 IST
ಯೋಗೇಂದ್ರ ಯಾದವ್‌
ಯೋಗೇಂದ್ರ ಯಾದವ್‌   

ಬೆಂಗಳೂರು: ‘ಸಂವಿಧಾನದ ಆಶಯಗಳು ಅಪಾಯದಲ್ಲಿರುವ ಸಂದರ್ಭದಲ್ಲಿ ಪ್ರಜಾಪ್ರಭುತ್ವವನ್ನು ಕಾಪಾಡಿಕೊಳ್ಳಲು ಪರ್ಯಾಯ ರಾಜಕಾರಣ ಒಂದೇ ಏಕೈಕ ಮಾರ್ಗ, ಅದಕ್ಕಾಗಿಪಕ್ಷೇತರ ಅಭ್ಯರ್ಥಿ ಪ್ರಕಾಶ್‌ ರಾಜ್‌ ಅವರನ್ನು ಗೆಲ್ಲಿಸುವ ಅಗತ್ಯವಿದೆ’ ಎಂದು ಸ್ವರಾಜ್‌ಇಂಡಿಯಾ ಪಕ್ಷದಅಧ್ಯಕ್ಷ ಯೋಗೇಂದ್ರ ಯಾದವ್‌ ಅಭಿಪ್ರಾಯಪಟ್ಟರು.

‌‌ನಗರದಲ್ಲಿ ಸೋಮವಾರ ಪ್ರಕಾಶ್‌ ರಾಜ್ ಅವರನ್ನು ಭೇಟಿ ಮಾಡಿದ ಬಳಿಕ ಅವರು ಮಾತನಾಡಿದರು.

‘ಕರ್ನಾಟಕದಲ್ಲಿ ಪರ್ಯಾಯ ರಾಜಕೀಯಕ್ಕೆ ಪ್ರಕಾಶ್‌ ರಾಜ್‌ ಅಡಿಪಾಯ ಹಾಕಿದ್ದಾರೆ. ಪ್ರಜಾಪ್ರಭುತ್ವದ ಆಶಯಗಳ ಪರ
ವಾಗಿರುವ ಮತದಾರರು ಅವರನ್ನು ಬೆಂಬಲಿಸಬೇಕು.ಜಾತ್ಯತೀತ ತತ್ವದ ಆಧಾರದ ಮೇಲೆವೋಟ್‌ ಮಾಡುವ ಮೂಲಕಗೆಲುವಿಗೆ ಕಾರಣವಾಗಬೇಕು’ ಎಂದರು.

ADVERTISEMENT

‘ದೇಶದಲ್ಲಿಬೆರಳೆಣಿಕೆಯಷ್ಟು ಮಂದಿ ಮಾತ್ರ ಇಂದು ಕೋಮುವಾದದ ವಿರುದ್ಧ ಹೋರಾಟ ಮಾಡುತ್ತಿದ್ದಾರೆ. ಅಂಥ ಹೋರಾಟಗಾರರಲ್ಲಿ ಪ್ರಕಾಶ್ ರಾಜ್ ಮುಂಚೂಣಿಯಲ್ಲಿದ್ದಾರೆ. ಜಾತ್ಯತೀತ ತತ್ವದ ಉಳಿವಿಗಾಗಿ ಹಾಗೂ ಏಕತೆ
ಗಾಗಿ ಮತದಾರರು ಅವರಿಗೆ ಮತ ಹಾಕಬೇಕು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.