ADVERTISEMENT

‘ಪುರುಷ ಪ್ರಧಾನ ಮನಸ್ಥಿತಿಯಿಂದ ಹಿನ್ನಡೆ’

ಭಾರತೀಯ ಮಹಿಳಾ ಕಾಕಸ್ ಸಮ್ಮೇಳನ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2018, 19:22 IST
Last Updated 8 ಡಿಸೆಂಬರ್ 2018, 19:22 IST
ಸಮ್ಮೇಳನದಲ್ಲಿ (ಎಡದಿಂದ) ತಾರಾ ಕೃಷ್ಣಸ್ವಾಮಿ, ಕೃಷ್ಣವೇಣಿ, ವರ್ಷಾ ನಿಕಮ್, ಅರ್ಚನಾ ಜತ್ಕರ್, ರಜತಿ ಸಲ್ಮಾ, ಲೀಲಾದೇವಿ ಆರ್.ಪ್ರಸಾದ್ ಮತ್ತು ರಾಜಶ್ರೀ ಭಾಗವಹಿಸಿದ್ದರು –ಪ್ರಜಾವಾಣಿ ಚಿತ್ರ
ಸಮ್ಮೇಳನದಲ್ಲಿ (ಎಡದಿಂದ) ತಾರಾ ಕೃಷ್ಣಸ್ವಾಮಿ, ಕೃಷ್ಣವೇಣಿ, ವರ್ಷಾ ನಿಕಮ್, ಅರ್ಚನಾ ಜತ್ಕರ್, ರಜತಿ ಸಲ್ಮಾ, ಲೀಲಾದೇವಿ ಆರ್.ಪ್ರಸಾದ್ ಮತ್ತು ರಾಜಶ್ರೀ ಭಾಗವಹಿಸಿದ್ದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ಅಲ್ಲಿ, ಪ್ರಗತಿಪರ ಚಿಂತಕಿಯರು, ರಾಜಕೀಯ ನಾಯಕಿಯರು, ಪತ್ರಕರ್ತೆಯರು, ಬರಹಗಾರ್ತಿಯರ ದಂಡೇ ನೆರೆದಿತ್ತು.

ಶಾಸಕಿಯರು ಮತ್ತು ಸಂಸತ್ ಸದಸ್ಯರಾಗಿ ಮಹಿಳಾ ಅಭ್ಯರ್ಥಿಗಳು ಚುನಾಯಿತರಾಗಲು ರಾಜಕೀಯ ಪಕ್ಷಗಳು ಟಿಕೆಟ್ ನೀಡುತ್ತಿಲ್ಲವೋ ಅಥವಾ ಮಹಿಳೆಯರು ಅಸಮರ್ಥರಾಗಿದ್ದಾರೋ ಎಂಬುದು ಅಲ್ಲಿ ನೆರೆದವರ ಚರ್ಚೆಯ ವಿಷಯವಾಗಿತ್ತು.

ನಗರದಲ್ಲಿ ಶನಿವಾರಭಾರತೀಯ ಮಹಿಳಾ ಕಾಕಸ್, ಈ ಸಮ್ಮೇಳನಆಯೋಜಿಸಿತ್ತು.

ADVERTISEMENT

ಮಹಿಳೆಯರ ರಾಜಕೀಯ ಪ್ರವೇಶವನ್ನು ವಿರೋಧಿಸಲು,ಅವರು ರಾಜಕೀಯದಲ್ಲಿ ಆಸಕ್ತಿ ಹೊಂದಿಲ್ಲ. ಆಡಳಿತ ಮತ್ತು ರಾಜಕೀಯಕ್ಕೆ ಅಸಮರ್ಥರು ಎಂಬ ವಾದ ಮಾಡಲಾಗುತ್ತದೆ. ಪುರುಷ ಪ್ರಧಾನಮನಸ್ಥಿತಿಯ ಚಿಂತನೆಗಳು ರಾಜಕೀಯದಲ್ಲಿ ಮಹಿಳಾಮುನ್ನಡೆಗೆ ಬೆಂಬಲಿಸುತ್ತಿಲ್ಲ ಎಂದು ಸಭೆ ಅಭಿಪ್ರಾಯಪಟ್ಟಿತು.

ಬರಹಗಾರ್ತಿ ಶ್ರೀಲತಾ ಬಾಟ್ಲಿವಾಲ, ‘ಪುರುಷ ಪ್ರಧಾನ ಸಮಾಜದಲ್ಲಿ ಅರ್ಹರಲ್ಲದವರಿಗೆನಾವೇಕೆ ದೇಶ ಮುನ್ನಡೆಸುವ ಜವಾಬ್ದಾರಿಯನ್ನು ನೀಡಿದ್ದೇವೆ? ಅನೇಕ ಮಹಿಳೆಯರು ನ್ಯಾಯ, ಮಾನವ ಹಕ್ಕುಗಳಿಗಾಗಿ ಪ್ರಾಮಾಣಿಕವಾಗಿ ಶ್ರಮಿಸಿದ್ದಾರೆ. ಸಮಾಜಮುಖಿ ಕೆಲಸಗಳಲ್ಲಿ ತೊಡಗಿದ್ದಾರೆ. ಇಂಥವರನ್ನು ರಾಜಕೀಯ ನಾಯಕರ ಸ್ಥಾನದಲ್ಲಿ ನೋಡಲು ಯಾಕೆ ಸಾಧ್ಯವಾಗುತ್ತಿಲ್ಲ’ ಎಂಬ ಪ್ರಶ್ನೆ ಎತ್ತಿದರು.

‘ರಾಜಕೀಯದಲ್ಲಿ ಪುರುಷ ಪ್ರಾಧಾನ್ಯ ಹೆಚ್ಚಾಗಿರುವುದರಿಂದ ಮಹಿಳೆಯರಿಗೆ ಅವಕಾಶಗಳು ಸಿಗುತ್ತಿಲ್ಲ. ಎಲ್ಲ ಪಕ್ಷಗಳು, ಅಭ್ಯರ್ಥಿಯ ಆರ್ಥಿಕ ಸ್ಥಿತಿಗತಿ, ಭದ್ರತೆ, ಬೆಂಬಲಿಗರನ್ನು ನೋಡಿಕೊಂಡೇ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ನೀಡುತ್ತಿವೆ’ ಎಂದು ಕಾಂಗ್ರೆಸ್‌ ನಾಯಕಿಸಿ.ಮೋಟಮ್ಮ ಅಭಿಪ್ರಾಯಪಟ್ಟರು.

‘ಕುಟುಂಬದ ಬೆಂಬಲ ಇಲ್ಲದಿರುವುದು, ಹಣ,ಜಾತಿಯ ಪ್ರಶ್ನೆಗಳಿಂದಾಗಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ರಾಜಕೀಯಕ್ಕೆ ಬರಲಾಗುತ್ತಿಲ್ಲ’ ಎಂದು ರಾಜಕೀಯ ವಿಶ್ಲೇಷಕಿಸುರಭಿ ಹೊಡಿಗೆರೆ ಅಭಿಪ್ರಾಯಪಟ್ಟರು.

ಕಾಂಗ್ರೆಸ್‌ವಕ್ತಾರೆಕವಿತಾ ರೆಡ್ಡಿ, ‘ಪಕ್ಷ ಮುಖ್ಯವಲ್ಲ. ಆದರೆ, ರಾಜಕೀಯದಲ್ಲಿಮಹಿಳೆಯರಿಗೆ ನೀಡುತ್ತಿರುವ ಪ್ರಾತಿನಿಧ್ಯ ಮುಖ್ಯ. ಕ್ಷೇತ್ರಗಳಲ್ಲಿಉತ್ತಮವಾಗಿಕೆಲಸ ಮಾಡುವರಿದ್ದರೆ ಪಕ್ಷಗಳು ಖಂಡಿತವಾಗಿಯೂ ಟಿಕೆಟ್ ನೀಡುತ್ತವೆ’ ಎಂದು ಹೇಳಿದರು.

‘ನೂರೆಂಟು ಕಟ್ಟು ಕಥೆಗಳ ನಡುವೆಯೂ ಮಹಿಳೆ ರಾಜಕೀಯ ಕ್ಷೇತ್ರದಲ್ಲಿ ಮುನ್ನುಗುತ್ತಿದ್ದಾಳೆ ಎನ್ನುವುದು ಖುಷಿಯ ಸಂಗತಿ’ ಎಂದು ಲೇಖಕಿ ತಾರಾಕೃಷ್ಣಸ್ವಾಮಿ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.