ADVERTISEMENT

ವಿನಯ್‌ ಕುಮಾರ್‌ ಮತ್ತು ತೇಜಸ್ವಿ ಸೂರ್ಯ ನಡುವೆ ‘ಎಕ್ಸ್’ ಜಗಳ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2024, 23:31 IST
Last Updated 23 ಮಾರ್ಚ್ 2024, 23:31 IST
ಸಂಸದ ತೇಜಸ್ವಿ ಸೂರ್ಯ
ಸಂಸದ ತೇಜಸ್ವಿ ಸೂರ್ಯ   

ವಿನಯ್‌ ಕುಮಾರ್‌ ಜಿ.ಬಿ. (ಕಾಂಗ್ರೆಸ್‌ ಟಿಕೆಟ್ ಆಕಾಂಕ್ಷಿ, ಇನ್‌ಸೈಟ್ಸ್‌ ಐಎಎಸ್‌ ಅಕಾಡೆಮಿ): ಸಾಧಾರಣ ಕುಟುಂಬವೊಂದರಲ್ಲಿ ಜನಿಸಿರುವುದು ನಮ್ಮ ತಪ್ಪು ಅಲ್ಲ ಎಂಬುದನ್ನು ಸಾಬೀತುಪಡಿಸಲು ಬಯಸಿದ್ದೇನೆ

ತೇಜಸ್ವಿ ಸೂರ್ಯ (ಬೆಂಗಳೂರು ದಕ್ಷಿಣ ಸಂಸದ): ನೀವು ತಪ್ಪಾದ ರಾಜಕೀಯ ಪಕ್ಷವನ್ನು ಆಯ್ಕೆ ಮಾಡಿಕೊಂಡಿದ್ದೀರಿ ಸಹೋದರ. ನಮ್ಮೊಂದಿಗೆ ಬನ್ನಿ. ಬಿಜೆಪಿ ಸೇರಿ. ನೀವು ಹೇಳಿರುವುದು ಸರಿಯಾಗಿದೆ. ನಿಮಗೆ ಒಳ್ಳೆಯದಾಗಲಿ.

ವಿನಯ್‌ ಕುಮಾರ್‌ ಜಿ.ಬಿ.: ಧನ್ಯವಾದಗಳು ಸಹೋದರ. ನಾನು ಸರಿಯಾದ ರಾಜಕೀಯ ಪಕ್ಷವನ್ನೇ ಆಯ್ಕೆ ಮಾಡಿಕೊಂಡಿದ್ದೇನೆ. ನನ್ನ ಪಕ್ಷವು ನನ್ನ ಶ್ರಮವನ್ನು ಪರಿಗಣಿಸಿ, ಕೋಮುವಾದ, ಅನ್ಯಾಯ ಮತ್ತು ಸಂವಿಧಾನವನ್ನು ದುರ್ಬಲಗೊಳಿಸಲು ಯತ್ನಿಸುತ್ತಿರುವವರ ವಿರುದ್ಧ ಹೋರಾಡಲು ಸೂಕ್ತವಾದ ಜವಾಬ್ದಾರಿಯನ್ನು ನೀಡುವ ವಿಶ್ವಾಸ ನನಗಿದೆ.

ADVERTISEMENT
 ವಿನಯ್‌ಕುಮಾರ್ ಜಿ.ಬಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.