ಬೆಂಗಳೂರು:ಯಲಹಂಕ ಮುಖ್ಯ ರಸ್ತೆಯ ಶ್ರೀನಿವಾಸಪುರ ವೃತ್ತದಲ್ಲಿ ಮುನಿರಾಜು (29) ಎಂಬುವರನ್ನು ಹತ್ಯೆ ಮಾಡಲಾಗಿದೆ.
‘ಯಲಹಂಕದ ಕೋಗಿಲು ನಿವಾಸಿ ಆಗಿದ್ದ ಮುನಿರಾಜು, ಟ್ರಕ್ ಚಾಲಕರಾಗಿದ್ದರು. ಹಳೇ ದ್ವೇಷದ ಹಿನ್ನೆಲೆಯಲ್ಲಿ ಸಂಬಂಧಿಕರೇ ಅವರನ್ನು ಕೊಲೆ ಮಾಡಿ ಪರಾರಿಯಾಗಿದ್ದಾರೆ’ ಎಂದು ಯಲಹಂಕ ಪೊಲೀಸರು ಹೇಳಿದರು.
‘ಭಾನುವಾರ ರಾತ್ರಿ 8 ಗಂಟೆ ಸುಮಾರಿಗೆ ಟ್ರಕ್ ಚಲಾಯಿಸಿಕೊಂಡು ಮುನಿರಾಜು ಮನೆಗೆ ಹೊರಟಿ ದ್ದರು.ಶ್ರೀನಿವಾಸಪುರ ವೃತ್ತದಲ್ಲಿ ಅಡ್ಡಗಟ್ಟಿದ್ದ ಸಂಬಂಧಿ ಮುನಿಸ್ವಾಮಿ ಹಾಗೂ ಅವರ ಮಗ, ಜಗಳ ತೆಗೆದಿದ್ದರು. ಮುನಿರಾಜು ಅವರ ಮೇಲೆ ಹಲ್ಲೆ ಮಾಡಿದ್ದರು. ನಂತರ, ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಂದಿದ್ದಾರೆ’ ಎಂದು ಪೊಲೀಸರು ತಿಳಿಸಿದರು.
‘ಮುನಿರಾಜು ಮತ್ತು ಮುನಿಸ್ವಾಮಿ ನಡುವೆ ವೈಷಮ್ಯವಿತ್ತು. ಆ ದ್ವೇಷದಲ್ಲೇ ಮುನಿಸ್ವಾಮಿ, ಅವರ ಮಗ ಈ ಕೃತ್ಯ ಎಸಗಿದ್ದಾರೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.