ADVERTISEMENT

ಸಂಸದ ತೇಜಸ್ವಿ ಸೂರ್ಯ ನೇತೃತ್ವದಲ್ಲಿ ‘ಯೂತ್ ಕ್ಯಾನ್ ಲೀಡ್’ ಅಭಿಯಾನ

​ಪ್ರಜಾವಾಣಿ ವಾರ್ತೆ
Published 11 ಜುಲೈ 2021, 20:22 IST
Last Updated 11 ಜುಲೈ 2021, 20:22 IST
ಯೂತ್ ಕ್ಯಾನ್ ಲೀಡ್ ತಂಡದೊಂದಿಗೆ ಸಂಸದ ತೇಜಸ್ವಿ ಸೂರ್ಯ ಹಾಗೂ ರವಿ ಹೆಗಡೆ
ಯೂತ್ ಕ್ಯಾನ್ ಲೀಡ್ ತಂಡದೊಂದಿಗೆ ಸಂಸದ ತೇಜಸ್ವಿ ಸೂರ್ಯ ಹಾಗೂ ರವಿ ಹೆಗಡೆ   

ಬೆಂಗಳೂರು: ‘ಆಡಳಿತದ ವಿವಿಧ ಮಜಲುಗಳ ಬಗ್ಗೆ ಅರಿಯಲು ಹಾಗೂ ನಾಗರಿಕರ ಜವಾಬ್ದಾರಿ ಹೆಚ್ಚಿಸಲು ‘ಯೂತ್ ಕ್ಯಾನ್ ಲೀಡ್' ಅಭಿಯಾನ ಸಹಕಾರಿ. ಇಂತಹ ಅಭಿಯಾನಗಳು ಹೆಚ್ಚಾಗಬೇಕು’ ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದರು.

ಬೆಂಗಳೂರು ದಕ್ಷಿಣ ಸಂಸದರ ಕಚೇರಿ ಆರಂಭಿಸಿರುವ ಈ ಅಭಿಯಾನದ ಕುರಿತು ಅವರು ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಎರಡು ತಿಂಗಳ ಈ ಕಾರ್ಯಕ್ರಮದಲ್ಲಿ ಅರ್ಹ ಅಭ್ಯರ್ಥಿಗಳಿಗೆ ಸರ್ಕಾರಿ ಆಡಳಿತ ಯಂತ್ರದ ಹಲವು ಮಜಲುಗಳು, ನೀತಿನಿರೂಪಣೆಯ ವಿಧಾನ, ಸರ್ಕಾರಿ ಯೋಜನೆಗಳ ಕುರಿತಾದ ಸರ್ವೆ ಸೇರಿದಂತೆ ಹಲವು ಮಾಹಿತಿಯನ್ನು ತಜ್ಞರಿಂದ ಒದಗಿಸಲಾಗುತ್ತದೆ. ಇಂತಹ ಕಾರ್ಯಕ್ರಮಗಳು ಸಾಮಾಜಿಕ ಪರಿವರ್ತನೆಗೆ ನಾಂದಿ ಹಾಡಲಿವೆ’ ಎಂದು ತಿಳಿಸಿದರು.

ADVERTISEMENT

ಕನ್ನಡಪ್ರಭ ಸಂಪಾದಕ ರವಿ ಹೆಗಡೆ ‘ಇಂತಹ ಕಾರ್ಯಕ್ರಮಗಳಿಂದ ನಾಗರಿಕರಲ್ಲಿ ಸಾಮಾಜಿಕ ಜವಾಬ್ದಾರಿ ಹೆಚ್ಚಿಸಲು ಸಾಧ್ಯ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.