ADVERTISEMENT

ಭ್ರಷ್ಟರ ವಿರುದ್ಧ ಹೋರಾಟ ಅಗತ್ಯ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2012, 8:20 IST
Last Updated 9 ಮಾರ್ಚ್ 2012, 8:20 IST

ಬೀದರ್: ವಿದ್ಯಾರ್ಥಿಗಳು ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸಬೇಕು ಎಂದು ಸಮಾಜ ಸೇವಕ ಚೆನ್ನಪ್ಪ ಸಂಗೋಳಗಿ ಸಲಹೆ ನೀಡಿದರು.

ತಾಲ್ಲೂಕಿನ ರಾಜಗೀರಾ ಗ್ರಾಮದ ಮಾತೆ ಮಾಣಿಕೇಶ್ವರಿ ಆಶ್ರಯದಲ್ಲಿ ಈಚೆಗೆ ನಡೆದ ಮನ್ನಳ್ಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ಶಿಬಿರದ ಸಮಾರೋಪ ಸಮಾರಂಭದಲ್ಲಿ  ಅವರು ಮಾತನಾಡಿದರು.

ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸುವ ಸಮಾಜ ಸೇವಕ ಅಣ್ಣ ಹಜಾರೆ ಅವರಂತೆ ಎಲ್ಲರೂ ಅದರ ವಿರುದ್ಧ ಧ್ವನಿ ಎತ್ತಬೇಕು ಎಂದರು. ಅಧ್ಯಕ್ಷತೆ ವಹಿಸಿದ ಪ್ರಾಚಾರ್ಯ ಸೋಮಶೇಖರ ಬಿರಾದಾರ ಎನ್‌ಎಸ್‌ಎಸ್  ಶಿಬಿರದಿಂದ ವಿದ್ಯಾರ್ಥಿಗಳ ಸರ್ವಾಂಗೀಣ ವಿಕಾಸವಾಗಲಿದೆ ಎಂದರು.

ಮಾತೆ ಮಾಣಿಕೇಶ್ವರಿ ಆಶ್ರಮದ ಸದಾನಂದ ಶಿವಯೋಗಿ, ಬಸವರಾಜ ಬಿರಾದಾರ ಮಾತನಾಡಿದರು.  ಮಾಣಿಕರಾವ ಸೂರ್ಯವಂಶಿ. ಗಂಗಾಧರ ಕೋರಿ, ಡಾ. ಸಂಜೀವಕುಮಾರ. ರಾಜಕುಮಾರ ಹೊಸದೊಡ್ಡೆ,  ಸಂಗಶೆಟ್ಟಿ ಶೆಟಕಾರ ಉಪಸ್ಥಿತರಿದ್ದರು. ಮಹೇಶಕುಮಾರ ನಿರೂಪಿಸಿದರು. ಮಂಜುಳಾ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.