ADVERTISEMENT

ವಾಡಿ: ನೀರು ಶುದ್ಧೀಕರಣ ಘಟಕ ಸಜ್ಜು

*₨12ಕೋಟಿ ವೆಚ್ಚ* ಮುಖ್ಯಮಂತ್ರಿಯಿಂದ ಉದ್ಘಾಟನೆ ನಾಳೆ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2014, 5:55 IST
Last Updated 27 ಫೆಬ್ರುವರಿ 2014, 5:55 IST
ವಾಡಿ ಪಟ್ಟಣ ಸಮೀಪದ ಕುಂದನೂರು ಗ್ರಾಮದಲ್ಲಿ ಶುದ್ಧ ಕುಡಿಯುವ ನೀರು ಪೂರೈಕೆಗೆಗಾಗಿ ಸಮಗ್ರ ನೀರು ಸರಬುರಾಜು ಯೋಜನೆಯಡಿ ₨12ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಿದ ಜಲ ಶುದ್ಧೀಕರಣ ಘಟಕ
ವಾಡಿ ಪಟ್ಟಣ ಸಮೀಪದ ಕುಂದನೂರು ಗ್ರಾಮದಲ್ಲಿ ಶುದ್ಧ ಕುಡಿಯುವ ನೀರು ಪೂರೈಕೆಗೆಗಾಗಿ ಸಮಗ್ರ ನೀರು ಸರಬುರಾಜು ಯೋಜನೆಯಡಿ ₨12ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಿದ ಜಲ ಶುದ್ಧೀಕರಣ ಘಟಕ   

ವಾಡಿ: ಪುರಸಭೆ ವತಿಯಿಂದ ಹಮ್ಮಿಕೊಂಡ ಸಮಗ್ರ ನೀರು ಸರಬ­ರಾಜು ಯೋಜನೆಯಡಿ ಸುಮಾರು ₨12ಕೋಟಿ ವೆಚ್ಚದಲ್ಲಿ ನಿರ್ಮಾಣ­ವಾದ ಜಲ ಶುದ್ಧೀಕರಣ ಘಟಕ ಸೇರಿ­ದಂತೆ ವಿವಿಧ ಕಾಮಗಾರಿಗಳ ಉದ್ಘಾ­ಟನೆ ಮತ್ತು ಶಿಲಾನ್ಯಾಸ ನೆರ­ವೇರಿಸಲು ಫೆ.28ರಂದು ಪಟ್ಟಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ನೀಡುತ್ತಿ­ದ್ದಾರೆ ಎಂದು ಅಧ್ಯಕ್ಷೆ ಹಸೀನ­ಬೇಗಂ ಖುರೇಷಿ ತಿಳಿಸಿದರು.

ಎಸ್‌ಎಫ್‌ಪಿ ಯೋಜನೆಯಡಿ ಸುಮಾರು ₨ 5ಲಕ್ಷ ವೆಚ್ಚದಲ್ಲಿ ಸಮು­ದಾಯ ಭವನ, ₨12ಲಕ್ಷದಲ್ಲಿ 7, 11 ನೇ ವಾರ್ಡ್‌ನಲ್ಲಿ ಮಹಿಳಾ ಸಮು­ದಾಯ ಶೌಚಾಲಯ ಕಟ್ಟಡವನ್ನು ಮುಖ್ಯಮಂತ್ರಿ ಉದ್ಘಾಟಿಸಿ ಮಹಿಳೆ­ಯರಿಗೆ ಅನುಕೂಲ ಮಾಡಿಕೊಡ­ಲಿದ್ದಾರೆ ಎಂದು ಬುಧವಾರ ಪುರ-­­ಸಭೆಯಲ್ಲಿ ಕರೆದ ಸುದ್ದಿಗೋಷ್ಠಿ­ಯಲ್ಲಿ ತಿಳಿಸಿದರು.

5,7,10,19,ವಾರ್ಡ್‌ನಲ್ಲಿ ಸುಮಾರು ₨69ಲಕ್ಷ ವೆಚ್ಚದಲ್ಲಿ ನಿರ್ಮಾ­ಣ ಮಾಡುತ್ತಿರುವ ಸಿಮೆಂಟ್‌ ರಸ್ತೆ ಮತ್ತು ಒಳಚರಂಡಿ ಕಾಮ­ಗಾರಿಗಳಿಗೆ ಗೂದ್ದಲಿ ಪೂಜೆ ಮತ್ತು ಉನ್ನತ ಶಿಕ್ಷಣದಲ್ಲಿ ವ್ಯಾಸಂಗ ಮಾಡುತ್ತಿ­ರುವ ವಿದ್ಯಾರ್ಥಿಗಳಿಗೆ ₨ 3ಲಕ್ಷ ಸಹಾಯಧನ ಮತ್ತು ₨ 6ಲಕ್ಷ ಆರೋಗ್ಯ ಪರಿಹಾರಧನ ಹಾಗೂ ಪುರಸಭೆ 23ಪೌರ ಕಾರ್ಮಿಕರರಿಗೆ ₨7ಲಕ್ಷದ ಅನಿಲ ಸಿಲಿಂಡರ್‌ ಉಚಿತ­ವಾಗಿ ಫಲಾನುಭವಿಗಳಿಗೆ ಮುಖ್ಯ­ಮಂತ್ರಿಗಳು ವಿತರಿಸಲಿದ್ದಾರೆ ಎಂದು ಮುಖ್ಯಾಧಿಕಾರಿ ರಮೇಶ ಪಟ್ಟೆದಾರ್‌ ಸಮಾರಂಭದ ವಿವರ ನೀಡಿದರು.

ಸ್ವಯಂ ಉದ್ಯೋಗ ಮಾಡುತ್ತಿರುವ ಯುವಕರಿಗೆ ₨ 23ಲಕ್ಷ ಸಹಾಯಧನ ಹಾಗೂ ಅಂಗವಿಕಲರಿಗೆ ಮೂರು ಸೈಕಲ್‌ ವಿತರಣೆ, ಮಹಿಳಾ ಸ್ವಸಹಾಯ ಗುಂಪುಗಳಿಗೆ ಆರ್ಥಿಕ ನೆರವು ನೀಡಲಾಗುತ್ತಿದೆ ಎಂದರು. ಫೆ.28ರ ಸಮಾರಂಭಕ್ಕೆ ಕೇಂದ್ರ ಸಚಿವ ಮಲ್ಲಿ­ಕಾರ್ಜುನ ಖರ್ಗೆ, ಸಚಿವ ಖಮರುಲ್‌ ಇಸ್ಲಾಂ ಭಾಗವಹಿಸುವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.