ADVERTISEMENT

‘ಆರ್ಥಿಕ ಸ್ವಾವಲಂಬನೆ ಸಾಧಿಸಿ’

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2014, 5:35 IST
Last Updated 1 ಮಾರ್ಚ್ 2014, 5:35 IST

ಹುಮನಾಬಾದ್: ಬ್ಯಾಂಕ್‌ ಸಾಲ ಸೌಲಭ್ಯದಿಂದ ಅಲ್ಪಸಂಖ್ಯಾತರು ಆರ್ಥಿಕ ಸ್ವಾವಲಂಬನೆ ಸಾಧಿಸಬೇಕು ಎಂದು ಸಂಸದ ಎನ್‌.ಧರ್ಮಸಿಂಗ್‌ ಹೇಳಿದರು.

ತಾಲ್ಲೂಕಿನ ಹಳ್ಳಿಖೇಡ(ಬಿ) ಗ್ರಾಮ­ದಲ್ಲಿ ಈಚೆಗೆ ಆಯೋಜಿಸಿದ್ದ ಅಲ್ಪಸಂಖ್ಯಾತ ಸಹಕಾರ ಬ್ಯಾಂಕ್‌ನ ಉದ್ಘಾಟಿಸಿ ಮಾತನಾಡಿದರು.
ಮಕ್ಕಳನ್ನು ದಿನಗೂಲಿ ಕೆಲಸಕ್ಕೆ ಕಳಿಸದೇ ಕಡ್ಡಾಯವಾಗಿ ಶಿಕ್ಷಣ ಕೊಡಿಸಿ, ಸುಶಿಕ್ಷಿತರನ್ನಾಗಿಸಬೇಕು. ಸಮಾಜದಲ್ಲಿ ಉನ್ನತ ಸ್ಥಾನಮಾನ ನೀಡಲು  ಪಾಲ­ಕರು ಪ್ರಾಮಾಣಿಕ­ವಾಗಿ ಪ್ರಯತ್ನಿಸ­ಬೇಕು ಎಂದರು.

ಗ್ರಾಮೀಣ ಭಾಗದಲ್ಲಿ ಅಲ್ಪ­ಸಂಖ್ಯಾತರ ಶ್ರೇಯೋಭಿವೃದ್ಧಿ ಉದ್ದೇಶ­ದಿಂದ ಸಹಕಾರ ಬ್ಯಾಂಕ್‌ ಆರಂಭಿಸಿ­ರುವುದು ಆರೋಗ್ಯಕರ ಬೆಳವಣಿಗೆ ಎಂದರು. ಬ್ಯಾಂಕ್‌ ಅಧ್ಯಕ್ಷ ಮಹ್ಮದ್‌ ಉಸ್ಮಾನಖಾನ್‌ ಮಿರ್ಜಾ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಸಯಲಾನಿ ಮಿರ್ಜಾ ಪ್ರಾಸ್ತಾವಿಕ ಮಾತನಾಡಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ಮಹಾಂತಯ್ಯ ಎಸ್‌.ತೀರ್ಥ, ಜಿಲ್ಲಾ ಸಹಕಾರ ಬ್ಯಾಂಕ್‌ ನಿರ್ದೇಶಕ ಭೀಮರಾವ ಬಿ.ಪಾಟೀಲ, ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷೆ ನಿಸಾಬಿ ಖಾಜಾಮಿಯ್ಯ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಿದ್ಯಾವತಿ ಎಸ್‌.­ರಂಜೋಳ­ಕರ್‌, ನಗರಸಭೆಯ ಮಾಜಿ ಸದಸ್ಯ ಮಹ್ಮದ್‌ ಗೌಸ್‌, ಎಂ.ಎ. ಖಲೀಲ್‌ ಅಹ್ಮದ್‌, ಚಿಂಚೋಳಿ ಗ್ರಾಮ ಪಂಚಾ­ಯಿತಿ ಅಧ್ಯಕ್ಷ ವಿಜಯ­ಕುಮಾರ, ಉಪಾ­ಧ್ಯಕ್ಷ ಚಾಂದ್‌ ಕಾರಭಾರಿ ಮತ್ತಿತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.