ADVERTISEMENT

ಉಡುಪಿ ಹೋಟೆಲ್‌ ವಿರುದ್ಧ ಕೇಸ್‌: 19 ಗೃಹಬಳಕೆ ಸಿಲಿಂಡರ್‌ ಜಪ್ತಿ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2024, 15:49 IST
Last Updated 17 ಏಪ್ರಿಲ್ 2024, 15:49 IST
ಬೀದರ್‌ನ ಸಿದ್ದಿ ವಿನಾಯಕ ದರ್ಶಿನಿ ಉಡುಪಿ ಹೋಟೆಲ್‌ನಿಂದ ಜಪ್ತಿ ಮಾಡಿಕೊಂಡಿರುವ ಗೃಹ ಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳು
ಬೀದರ್‌ನ ಸಿದ್ದಿ ವಿನಾಯಕ ದರ್ಶಿನಿ ಉಡುಪಿ ಹೋಟೆಲ್‌ನಿಂದ ಜಪ್ತಿ ಮಾಡಿಕೊಂಡಿರುವ ಗೃಹ ಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳು   

ಬೀದರ್‌: ನಗರದ ಸಿದ್ದಿ ವಿನಾಯಕ ದರ್ಶಿನಿ ಉಡುಪಿ ಹೋಟೆಲ್‌ ಮೇಲೆ ಬುಧವಾರ ದಾಳಿ ನಡೆಸಿರುವ ಆಹಾರ ಇಲಾಖೆಯ ಅಧಿಕಾರಿಗಳು ಗೃಹ ಬಳಕೆಯ 19 ಎಲ್‌ಪಿಜಿ ಸಿಲಿಂಡರ್‌ಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ.

ಉಪವಿಭಾಗಾಧಿಕಾರಿ ಲವೀಶ್‌ ಒರ್ಡಿಯಾ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ ಆಹಾರ ಇಲಾಖೆಯ ಅರುಣ್‌, ಅಮಿತ್‌ ಹಾಗೂ ಪೊಲೀಸರು ಪಾಲ್ಗೊಂಡಿದ್ದರು. ಮಾರ್ಕೆಟ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಗೃಹ ಬಳಕೆಯ ಸಿಲಿಂಡರ್‌ಗಳನ್ನು ವಾಣಿಜ್ಯ ಸ್ಥಳಗಳಲ್ಲಿ ಬಳಸುವುದು ಶಿಕ್ಷಾರ್ಹ ಅಪರಾಧವಾಗಿದೆ’ ಎಂದು ಲವೀಶ್‌ ಒರ್ಡಿಯಾ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.