ಬೀದರ್: ಮಾದಕ ವಸ್ತುಗಳ ವಿಲೇವಾರಿ ಸಮಿತಿ ವತಿಯಿಂದ ಅಂತರರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನಾಚರಣೆ ಅಂಗವಾಗಿ ವಿವಿಧ ಪ್ರಕರಣಗಳಲ್ಲಿ ವಶಪಡಿಸಿಕೊಳ್ಳಲಾಗಿದ್ದ ಒಟ್ಟು ₹ 62 ಲಕ್ಷ ಮೊತ್ತದ ಗಾಂಜಾ ಹಾಗೂ ಇತರೆ ಮಾದಕ ವಸ್ತುಗಳನ್ನು ಭಾನುವಾರ ನಾಶ ಪಡಿಸಲಾಯಿತು.
ನಗರದ ಹೊರವಲಯದಲ್ಲಿ ವಿವಿಧ ಪ್ರಕರಣಗಳಲ್ಲಿ ವಶಪಡಿಸಿಕೊಳ್ಳಲಾದ ಮಾದಕ ವಸ್ತಗಳನ್ನು ಸುಟ್ಟು ಹಾಕಲಾಯಿತು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಕಿಶೋರಬಾಬು ನೇತೃತ್ವದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಹೇಶ ಮೇಘಣ್ಣವರ, ಬೀದರ್ ಡಿವೈಎಸ್ಪಿ ಕೆ.ಎಂ.ಸತೀಶ, ಭಾಲ್ಕಿ ಡಿವೈಎಸ್ಪಿ ಪೃಥ್ವಿಕ್ ಶಂಕರ, ಮಾಲಿನ್ಯ ನಿಯಂತ್ರಣ ಮಂಡಳಿ ಕ್ಷೇತ್ರ ಸಹಾಯಕ ಮಹೇಶ ಭೀಮರೆಡ್ಡಿ, ಡಿಇಒ ಧನರಾಜ ನಾರಾಯಣರಾವ, ಡಿಸಿಆರ್ಪಿ ಸಿಪಿಐ ಪುಲ್ಲಯ್ಯ ರಾಠೋಡ, ಪಿಎಸ್ಐ ರವಿಕುಮಾರ, ಮುಖ್ಯಪೇದೆ ಸುನೀಲ ಬಿಚಕುಂದೆ, ಗೋರಖನಾಥ ಸಮ್ಮುಖದಲ್ಲಿ ಗಾಂಜಾ ನಾಶಪಡಿಸಲಾಯಿತು.
ಜಿಲ್ಲೆಯ 11 ಠಾಣೆಯ ಪಿಎಸ್ಐ ಹಾಗೂ ಸಿಬ್ಬಂದಿ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.