ADVERTISEMENT

ಅಪಘಾತ: ಮೂವರು ತುಳಜಾಪುರ ಯಾತ್ರಾರ್ಥಿಗಳು ಸಾವು

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2019, 14:22 IST
Last Updated 1 ಅಕ್ಟೋಬರ್ 2019, 14:22 IST
ಅಪಘಾತಗೊಂಡು ಜಮೀನಿನಲ್ಲಿ ಬಿದ್ದಿರುವ ಓಮಿನಿ
ಅಪಘಾತಗೊಂಡು ಜಮೀನಿನಲ್ಲಿ ಬಿದ್ದಿರುವ ಓಮಿನಿ   

ಹುಮನಾಬಾದ್: ಪಟ್ಟಣದ ಹೊರವಲಯದ ರಾಷ್ಟ್ರೀಯ ಹೆದ್ದಾರಿಯಲ್ಲಿ ಚೆಕ್‌ಪೋಸ್ಟ್ ಬಳಿ ಮಂಗಳವಾರ ಮಹಿಂದ್ರಾ ಟಿಯುವಿ ಮತ್ತು ಓಮಿನಿ ನಡುವೆ ಅಪಘಾತ ಸಂಭವಿಸಿ ಮೂವರು ಯಾತ್ರಾರ್ಥಿಗಳು ಸಾವನ್ನಪ್ಪಿದ್ದು, ಏಳು ಮಂದಿ ಗಾಯಗೊಂಡಿದ್ದಾರೆ.

ಬೀದರ್ ತಾಲ್ಲೂಕಿನ ಚಿಲರ್ಗಿ ಗ್ರಾಮದ ಶಿವರಾಜ ಪುಂಡಲೀಕ ಭುತಪೋಲೆ(40) ಸ್ಥಳದಲ್ಲೇ ಮೃತಪಟ್ಟರೆ, ಬೀದರ್‌ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ರಾಯಪ್ಪ ಘಾಳೆಪ್ಪ ಭುತಪೋಲೆ (40), ತುಕಾರಾಂ ಮಾರುತಿ ಬೋರಾಳೆ (50) ಮೃತಪಟ್ಟಿದ್ದಾರೆ.

ಅದೇ ಗ್ರಾಮದ ಓಮಿನಿ ವಾಹನ ಚಾಲಕ ಖಾಸೀಂ, ಪಾರಮ್ಮ, ನಾಗಮ್ಮ, ಸವಿತಾ, ನರಸಿಂಗ್‌, ಅಶೋಕ ಎಂಬವರಿಗೆ ಸಣ್ಣಪುಟ್ಟ ಗಾಯಗಳಾವೆ. ಗಾಯಳುಗಳು ತುಳಜಾಪುರ ಅಂಬಾಭವಾನಿ ದರ್ಶನ ಮುಗಿಸಿ ವಾಪಸ್‌ ಆಗುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ ಎಂದು ಹುಮನಾಬಾದ್ ಸಂಚಾರ ಠಾಣೆ ಪೊಲೀಸರು ತಿಳಿಸಿದ್ದಾರೆ.

ADVERTISEMENT

ಅಪಘಾತದ ನಂತರ ಮಹೇಂದ್ರ ವಾಹನದ ಚಾಲಕ ಪರಾರಿಯಾಗಿದ್ದು, ವಾಹನವು ಮಹಾರಾಷ್ಟ್ರದ ಉಸ್ಮಾನಬಾದ್‌ ಮೂಲದ ವ್ಯಕ್ತಿಯೊಬ್ಬರಿಗೆ ಸೇರಿದ್ದಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.