ಬೀದರ್: ಕೊರೊನಾ ಸೋಂಕಿನಿಂದ ಜನರ ರಕ್ಷಣೆಗೆ ಶ್ರಮಿಸುತ್ತಿರುವ ಆಶಾ ಕಾರ್ಯಕರ್ತೆಯರನ್ನು ಶ್ರೀರಾಮ ಯುವ ಸೇನೆ ವತಿಯಿಂದ ನಗರದ ಕುಂಬಾರವಾಡದಲ್ಲಿ ಸನ್ಮಾನಿಸಲಾಯಿತು.
ಸೇನೆ ಪದಾಧಿಕಾರಿಗಳು ಆಶಾ ಕಾರ್ಯಕರ್ತೆಯರಿಗೆ ಶಾಲು ಹೊದಿಸಿ ಸನ್ಮಾನಿಸಿದರು.
ಲಾಕ್ಡೌನ್ನಿಂದ ಕೆಲಸವಿಲ್ಲದೆ ತೊಂದರೆಯಲ್ಲಿರುವ 100 ಕಾರ್ಮಿಕರ ಕುಟುಂಬಗಳಿಗೆ ಆಹಾರಧಾನ್ಯ ಕಿಟ್ ವಿತರಿಸಲಾಯಿತು.
ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಆಕಾಶ ಗ್ಯಾನಪ್ಪನೋರ್, ಉಪಾಧ್ಯಕ್ಷ ವಿನೋದ ಬಾಮಂದಿ, ಸಂತೋಷ ಡೈರಿ, ಪರಮೇಶ ಬರಲೆ, ಲಿಂಗರಾಜ, ನಾಗಯ್ಯ ಸ್ವಾಮಿ, ನಿಖಿಲ್ ಹಂಜಿ, ಶಿವು ಭೂಶೆಟ್ಟಿ, ಪವನ್, ರಾಜು ಮಜ್ಜಿಗೆ, ಸಂಗಪ್ಪ ಗುಂಡಪ್ಪ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.