ADVERTISEMENT

ಬೀದರ್: ಆಶಾ ಕಾರ್ಯಕರ್ತೆಯರಿಗೆ ಸನ್ಮಾನ

​ಪ್ರಜಾವಾಣಿ ವಾರ್ತೆ
Published 13 ಜೂನ್ 2021, 16:06 IST
Last Updated 13 ಜೂನ್ 2021, 16:06 IST
ಬೀದರ್‌ನ ಕುಂಬಾರವಾಡದ ಕಾಳಿಕಾದೇವಿ ಮಂದಿರದಲ್ಲಿ ಶ್ರೀರಾಮ ಯುವ ಸೇನೆ ವತಿಯಿಂದ ಆಶಾ ಕಾರ್ಯಕರ್ತೆಯರನ್ನು ಸನ್ಮಾನಿಸಲಾಯಿತು
ಬೀದರ್‌ನ ಕುಂಬಾರವಾಡದ ಕಾಳಿಕಾದೇವಿ ಮಂದಿರದಲ್ಲಿ ಶ್ರೀರಾಮ ಯುವ ಸೇನೆ ವತಿಯಿಂದ ಆಶಾ ಕಾರ್ಯಕರ್ತೆಯರನ್ನು ಸನ್ಮಾನಿಸಲಾಯಿತು   

ಬೀದರ್: ಕೊರೊನಾ ಸೋಂಕಿನಿಂದ ಜನರ ರಕ್ಷಣೆಗೆ ಶ್ರಮಿಸುತ್ತಿರುವ ಆಶಾ ಕಾರ್ಯಕರ್ತೆಯರನ್ನು ಶ್ರೀರಾಮ ಯುವ ಸೇನೆ ವತಿಯಿಂದ ನಗರದ ಕುಂಬಾರವಾಡದಲ್ಲಿ ಸನ್ಮಾನಿಸಲಾಯಿತು.

ಸೇನೆ ಪದಾಧಿಕಾರಿಗಳು ಆಶಾ ಕಾರ್ಯಕರ್ತೆಯರಿಗೆ ಶಾಲು ಹೊದಿಸಿ ಸನ್ಮಾನಿಸಿದರು.

ಲಾಕ್‍ಡೌನ್‍ನಿಂದ ಕೆಲಸವಿಲ್ಲದೆ ತೊಂದರೆಯಲ್ಲಿರುವ 100 ಕಾರ್ಮಿಕರ ಕುಟುಂಬಗಳಿಗೆ ಆಹಾರಧಾನ್ಯ ಕಿಟ್ ವಿತರಿಸಲಾಯಿತು.

ADVERTISEMENT

ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಆಕಾಶ ಗ್ಯಾನಪ್ಪನೋರ್, ಉಪಾಧ್ಯಕ್ಷ ವಿನೋದ ಬಾಮಂದಿ, ಸಂತೋಷ ಡೈರಿ, ಪರಮೇಶ ಬರಲೆ, ಲಿಂಗರಾಜ, ನಾಗಯ್ಯ ಸ್ವಾಮಿ, ನಿಖಿಲ್ ಹಂಜಿ, ಶಿವು ಭೂಶೆಟ್ಟಿ, ಪವನ್, ರಾಜು ಮಜ್ಜಿಗೆ, ಸಂಗಪ್ಪ ಗುಂಡಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.