ADVERTISEMENT

‘ಚುನಾವಣೆ ಕಾರಣಕ್ಕೆ ಮಹಾದ್ವಾರ ನಿರ್ಮಾಣ’

​ಪ್ರಜಾವಾಣಿ ವಾರ್ತೆ
Published 19 ಮೇ 2022, 3:10 IST
Last Updated 19 ಮೇ 2022, 3:10 IST

ಔರಾದ್: ಪಟ್ಟಣದಲ್ಲಿ ಅಮರೇಶ್ವರ ದೇವಸ್ಥಾನದ ಮಹಾದ್ವಾರ ನಿರ್ಮಾಣಕ್ಕೆ ಪಶು ಸಂಗೋಪನೆ ಸಚಿವ ಪ್ರಭು ಚವಾಣ್ ಭೂಮಿಪೂಜೆ ನೆರವೇರಿಸಿದ್ದಕ್ಕೆ ಕಾಂಗ್ರೆಸ್ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ಆಕ್ಷೇಪ ವ್ಯಕ್ತಪಡಿಸಿವೆ.

ಸರ್ಕಾರದ ಅನುದಾನ ಇಲ್ಲದೆ, ಟೆಂಡರ್ ಕರೆಯದೆ ಕಾಮಗಾರಿ ಶುರು ಮಾಡಲು ಹೇಗೆ ಬರುತ್ತದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜಕುಮಾರ ಹಲಬರ್ಗೆ, ಕರವೇ ಅಧ್ಯಕ್ಷ ರಾಜಕುಮಾರ ಯಡವೆ ಪ್ರಶ್ನಿಸಿದ್ದಾರೆ. ‘14 ವರ್ಷಗಳಿಂದ ಶಾಸಕರಾಗಿರುವ ಪ್ರಭು ಚವಾಣ್ ಮರೇಶ್ವರ ದೇವಸ್ಥಾನದ ಕುರಿತು ಕಾಳಜಿ ತೋರಿರಲಿಲ್ಲ. ಈಗ ಏಕಾಏಕಿ ಜೀರ್ಣೋದ್ಧಾರದ ಮಾತು ಆಡುತ್ತಿದ್ದಾರೆ. ಚುನಾವಣೆ ಸಮೀಪಿ ಸುತ್ತಿರುವುದರಿಂದ ಜನರನ್ನು ಮರಳು ಮಾಡುವ ಕೆಲಸ ಮಾಡುತ್ತಿದ್ದಾರೆ’ ಎಂದು ಟೀಕಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT