ADVERTISEMENT

ಬೀದರ್‌: ₹3 ಲಕ್ಷ ಚಿನ್ನಾಭರಣದ ಬ್ಯಾಗ್‌ ಮರಳಿಸಿ ಪ್ರಾಮಾಣಿಕತೆ ಮೆರೆದ ಆಟೋ ಚಾಲಕ

​ಪ್ರಜಾವಾಣಿ ವಾರ್ತೆ
Published 31 ಜುಲೈ 2025, 5:02 IST
Last Updated 31 ಜುಲೈ 2025, 5:02 IST
ಆಟೋ ಚಾಲಕ ನವೀನ್‌ ಬಸಪ್ಪ ಅವರು ಜಾಲಿಂದರ್‌ ಅವರಿಗೆ ಬ್ಯಾಗ್‌ ಮರಳಿಸಿದರು
ಆಟೋ ಚಾಲಕ ನವೀನ್‌ ಬಸಪ್ಪ ಅವರು ಜಾಲಿಂದರ್‌ ಅವರಿಗೆ ಬ್ಯಾಗ್‌ ಮರಳಿಸಿದರು   

ಬೀದರ್‌: ₹3 ಲಕ್ಷ ಮೌಲ್ಯದ ಚಿನ್ನಾಭರಣವಿದ್ದ ಬ್ಯಾಗ್‌ ಮರೆತು ಬಿಟ್ಟು ಹೋಗಿದ್ದ ಪ್ರಯಾಣಿಕನಿಗೆ ವಾಪಸ್‌ ಮರಳಿಸಿ ಆಟೋ ಚಾಲಕ ಪ್ರಾಮಾಣಿಕತೆ ಮೆರೆದಿದ್ದಾನೆ.

ನಗರದ ಆಟೋ ಚಾಲಕ ನವೀನ್‌ ಬಸಪ್ಪ ಅವರು ಬಸವಕಲ್ಯಾಣದ ಜಾಲಿಂದರ್‌ ಅವರಿಗೆ ಚಿನ್ನಾಭರಣವಿದ್ದ ಬ್ಯಾಗ್‌ ಮರಳಿಸಿದ್ದಾರೆ. ಜಾಲಿಂದರ್‌ ಅವರು ಮಂಗಳವಾರ ಬೆಳಿಗ್ಗೆ ಬೆಂಗಳೂರಿನಿಂದ ಬೀದರ್‌ಗೆ ರೈಲಿನಲ್ಲಿ ಬಂದಿದ್ದಾರೆ. ರೈಲು ನಿಲ್ದಾಣದಿಂದ ಆಟೋದಲ್ಲಿ ಬಸ್‌ ನಿಲ್ದಾಣಕ್ಕೆ ತೆರಳಿದ್ದಾರೆ. ಅವಸರದಲ್ಲಿ ಆಟೋದಲ್ಲಿ ಇಟ್ಟಿದ್ದ ಬ್ಯಾಗ್‌ ಮರೆತು ಬಸ್ಸಿನಲ್ಲಿ ಬಸವಕಲ್ಯಾಣಕ್ಕೆ ಪ್ರಯಾಣ ಬೆಳೆಸಿದ್ದಾರೆ. ಬ್ಯಾಗ್‌ ಗಮನಿಸಿದ ಆಟೋಚಾಲಕ ನವೀನ್‌ ಬಸಪ್ಪ ಅವರು ಗಸ್ತಿನಲ್ಲಿದ್ದ ಸಂಚಾರ ಠಾಣೆ ಎಎಸ್‌ಐ ಶಿವರಾಜ ಧನ್ನೂರ್‌ ಅವರಿಗೆ ವಿಷಯ ತಿಳಿಸಿದ್ದಾರೆ. ಬಳಿಕ ಜಾಲಿಂದರ್‌ ಅವರನ್ನು ಸಂಪರ್ಕಿಸಿ ಬ್ಯಾಂಕ್‌ ಮರಳಿಸಲಾಗಿದೆ. ಆಟೋ ಚಾಲಕನ ಪ್ರಾಮಾಣಿಕತೆಯನ್ನು ಎಸ್ಪಿ ಪ್ರದೀಪ್‌ ಗುಂಟಿ ಶ್ಲಾಘಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT