ADVERTISEMENT

‘ಬ್ಯಾರೇಜ್‌, ಕೆರೆಗಳಿಗೆ ಗೇಟ್‌ ಅಳವಡಿಸಿ’

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2022, 13:26 IST
Last Updated 30 ನವೆಂಬರ್ 2022, 13:26 IST
ಕಮಲನಗರ ತಾಲ್ಲೂಕಿನ ಬ್ಯಾರೇಜ್ ಮತ್ತು ಕೆರೆಗಳಿಗೆ ಅಳವಡಿಸಲಾದ ಗೇಟ್‍ಗಳನ್ನು ಬದಲಿಸಬೇಕು ಎಂದು ಒತ್ತಾಯಿಸಿ ರೈತ ಸಂಘದ ಪದಾಧಿಕಾರಿ ಗಳು ಮನವಿ ಸಲ್ಲಿಸಿದರು
ಕಮಲನಗರ ತಾಲ್ಲೂಕಿನ ಬ್ಯಾರೇಜ್ ಮತ್ತು ಕೆರೆಗಳಿಗೆ ಅಳವಡಿಸಲಾದ ಗೇಟ್‍ಗಳನ್ನು ಬದಲಿಸಬೇಕು ಎಂದು ಒತ್ತಾಯಿಸಿ ರೈತ ಸಂಘದ ಪದಾಧಿಕಾರಿ ಗಳು ಮನವಿ ಸಲ್ಲಿಸಿದರು   

ಕಮಲನಗರ: ‘ತಾಲ್ಲೂಕಿನ ಎಲ್ಲ ಬ್ರಿಡ್ಜ್‌ ಕಂ ಬ್ಯಾರೇಜ್‍ಗಳಿಗೆ ಅಳವಡಿಸಿದ ಗೇಟ್‍ಗಳು ಸರಿಯಾಗಿ ಕಾರ್ಯನಿರ್ವಹಿಸದ ಕಾರಣ ಕೆರೆ ಮತ್ತು ನದಿಗಳಲ್ಲಿ ನೀರು ಸಂಗ್ರಹವಾಗುತ್ತಿಲ್ಲ. ಬದಲಿ ಗೇಟ್‌ಗಳನ್ನು ಅಳವಡಿಸಬೇಕು’ ಎಂದು ರೈತ ಸಂಘದ ಪದಾಧಿಕಾರಿಗಳು ತಹಶೀಲ್ದಾರರಿಗೆ ಮನವಿ ಪತ್ರ ಸಲ್ಲಿಸಿ ಒತ್ತಾಯಿಸಿದರು.

ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಪ್ರವೀಣ ಕುಲಕರ್ಣಿ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು.

ಬ್ಯಾರೇಜ್ ಮತ್ತು ಕೆರೆಗಳಿಗೆ ಅಳವಡಿಸಿದ ಗೇಟ್‍ಗಳ ಖರೀದಿಯಲ್ಲಿ ಅವ್ಯವಹಾರ ನಡೆದಿದೆ. ಇದರಿಂದ ಕಳಪೆ ಗುಣಮಟ್ಟದ ಗೇಟ್‍ಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಕೆರೆ ಮತ್ತು ಬ್ಯಾರೇಜ್‍ಗಳಲ್ಲಿ ನೀರು ಸಂಗ್ರಹವಾಗದೆ ಸೋರಿ ಹೋಗುತ್ತಿದೆ. ಇದರಿಂದ ಹೊಲಗಳಿಗೆ ನೀರು ಹರಿಸಲು ಸಾಧ್ಯವಾಗುತ್ತಿಲ್ಲ. ತಕ್ಷಣ ಕ್ರಮ ಕೈಗೊಂಡು ಸೂಕ್ತ ಗೇಟ್‍ಗಳನ್ನು ಅಳವಡಿಸಬೇಕು ಎಂದು ತಿಳಿಸಿದ್ದಾರೆ.

ADVERTISEMENT

ಗ್ರಾಮ ಘಟಕದ ಅಧ್ಯಕ್ಷ ಮಡಿವಾಳಪ್ಪ ಮುರ್ಕೆ, ಉಪಾಧ್ಯಕ್ಷ ಚನ್ನಬಸಪ್ಪ ಬಿರಾದಾರ, ಚಂದ್ರಕಾಂತ ಬಿರಾದಾರ, ಮಡಿವಾಳಪ್ಪ, ಸಂಗಮೇಶ ಬಿರಾದಾರ ಹಾಗೂ ಉಮಾಕಾಂತ ಬನವಾಸೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.