ADVERTISEMENT

ಸಂಭ್ರಮದ ಬುತ್ತಿ ಬಸವಣ್ಣ ರಥೋತ್ಸವ

​ಪ್ರಜಾವಾಣಿ ವಾರ್ತೆ
Published 9 ಮೇ 2019, 15:34 IST
Last Updated 9 ಮೇ 2019, 15:34 IST
ಬೀದರ್‌ನ ಚಿದ್ರಿಯಲ್ಲಿ ಬುತ್ತಿ ಬಸವಣ್ಣ ಜಾತ್ರೆ ಪ್ರಯುಕ್ತ ರಥೋತ್ಸವ ನಡೆಯಿತು
ಬೀದರ್‌ನ ಚಿದ್ರಿಯಲ್ಲಿ ಬುತ್ತಿ ಬಸವಣ್ಣ ಜಾತ್ರೆ ಪ್ರಯುಕ್ತ ರಥೋತ್ಸವ ನಡೆಯಿತು   

ಬೀದರ್: ಇಲ್ಲಿಯ ಚಿದ್ರಿಯಲ್ಲಿ ಬುತ್ತಿ ಬಸವಣ್ಣ ದೇವಸ್ಥಾನದ 19ನೇ ಜಾತ್ರಾ ಮಹೋತ್ಸವ ಪ್ರಯುಕ್ತ ಸಂಭ್ರಮ ಸಡಗರದೊಂದಿಗೆ ರಥೋತ್ಸವ ನಡೆಯಿತು.

ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆಯಿಂದ ಅಪಾರ ಸಂಖ್ಯೆಯಲ್ಲಿ ಬಂದಿದ್ದ ಭಕ್ತರು ರಥೋತ್ಸವಕ್ಕೆ ಸಾಕ್ಷಿಯಾದರು.
ರಥ, ನಂದಿ ಮೂರ್ತಿಗೆ ಅಭಿಷೇಕ, ಷಟ್‌ಸ್ಥಲ ಧ್ವಜಾರೋಹಣ, ದೀಪೋತ್ಸವ, ಮಹಾ ಮಂಗಳಾರತಿ ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳು ಶ್ರದ್ಧಾ ಭಕ್ತಿಯಿಂದ ನಡೆದವು.

ಕಲಾವಿದ ತುಕಾರಾಮ ಜಾದು ಹಾಗೂ ವೈಜಿನಾಥ ಸಜ್ಜನಶೆಟ್ಟಿ ಹಾಸ್ಯ ಕಾರ್ಯಕ್ರಮ ನಡೆಸಿಕೊಟ್ಟರು. ಬೇಮಳಖೇಡ ಮಠದ ಡಾ. ರಾಜಶೇಖರ ಸ್ವಾಮೀಜಿ ಗೋರಟಾ ಸಾನಿಧ್ಯ ವಹಿಸಿದ್ದರು.

ADVERTISEMENT

ದೇವಸ್ಥಾನ ಟ್ರಸ್ಟ್‌ನ ರಮೇಶ ಮಾಶೆಟ್ಟಿ ಚಿದ್ರಿ, ಅಮೃತ ಟೋಕರೆ, ಅನೀಲ ಪಾಟೀಲ, ಸಂಗಶೆಟ್ಟಿ ಸಿದ್ಧೇಶ್ವರ, ರಾಜಶೇಖರ ಬಿರಾದಾರ, ರಾಜಕುಮಾರ ಬಿರಾದಾರ, ಸೋಮಶೇಖರ ಬಿರಾದಾರ, ಅನೀಲ ಪಾಟೀಲ, ಅಪ್ಪಣ್ಣ ಪಾಟೀಲ, ಚಂದ್ರಕಾಂತ ಚಿದ್ರಿ, ಸಂಗಪ್ಪ ಚಿದ್ರಿ, ರವಿ ಪ್ರಭು, ಶಿವಾನಂದ ಸ್ವಾಮಿ, ವಿಜಯಕುಮಾರ ಸ್ವಾಮಿ, ಅಶೋಕ ಸ್ವಾಮಿ, ಅನಂತರೆಡ್ಡಿ, ನಾರಾಯಣರೆಡ್ಡಿ ಸಂಜುರೆಡ್ಡಿ, ಸಂದೀಪರೆಡ್ಡಿ, ಸೋಮಶೇಖರ ಪಾಟೀಲ ಕಾಡವಾದ, ನಾಗಶೆಟ್ಟಿ ಧರಂಪುರ, ವೀರಶೆಟ್ಟಿ ಮಾಶೆಟ್ಟಿ, ಗಿರೀಶ ಪಾಟೀಲ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.