ADVERTISEMENT

ಬೀದರ್‌ ಡಿಸಿಸಿ ಬ್ಯಾಂಕ್‌ಗೆ 14 ನಿರ್ದೇಶಕರು ಅವಿರೋಧ ಆಯ್ಕೆ

ಉಮಾಕಾಂತ ನಾಗಮಾರಪಳ್ಳಿ ಬಣ ಮತ್ತೆ ಅಧಿಕಾರಕ್ಕೆ, 2022ರ ತನಕ ಅವಧಿ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2018, 18:53 IST
Last Updated 21 ಅಕ್ಟೋಬರ್ 2018, 18:53 IST

ಬೀದರ್‌: ಇಲ್ಲಿಯ ಡಿಸಿಸಿ ಬ್ಯಾಂಕ್‌ ಆಡಳಿತ ಮಂಡಳಿಗೆ ಉಮಾಕಾಂತ ನಾಗಮಾರಪಳ್ಳಿ ನೇತೃತ್ವದಲ್ಲಿ ನಾಮಪತ್ರ ಸಲ್ಲಿಸಿದ್ದ ಎಲ್ಲ 14 ಅಭ್ಯರ್ಥಿಗಳು ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ನಾಮಪತ್ರ ಹಿಂದಕ್ಕೆ ಪಡೆಯಲು ಭಾನುವಾರಕೊನೆಯ ದಿನವಾಗಿತ್ತು. ನಿರ್ದೇಶಕರ ಸ್ಥಾನಕ್ಕೆ ಒಂದೊಂದೇ ನಾಮಪತ್ರ ಸಲ್ಲಿಕೆಯಾದ್ದರಿಂದ ಚುನಾವಣಾ ಅಧಿಕಾರಿ ಶಿವಕುಮಾರ ಶೀಲವಂತ ಅವರು ಅವಿರೋಧ ಆಯ್ಕೆ ಪ್ರಕಟಿಸಿದರು.

2018 ರಿಂದ 2022ರ ಅವಧಿಗೆ ನಿರ್ದೇಕರಾಗಿ ಉಮಾಕಾಂತ ಗುರುಪಾದಪ್ಪ ನಾಗಮಾರಪಳ್ಳಿ, ಭೀಮರಾವ್ ಬಸವರಾಜ್ ಪಾಟೀಲ, ರಾಚಪ್ಪ ಬಸವಣಪ್ಪ ಪಾಟೀಲ, ಅಮರಕುಮಾರ ಭೀಮಣ್ಣ ಖಂಡ್ರೆ, ಬಸವರಾಜ್ ಸಂಗಪ್ಪ ಹೆಬ್ಬಾಳೆ, ವಿಜಯಕುಮಾರ ಸುಭಾಷರಾವ್ ಪಾಟೀಲ, ಶಿವಶರಣಪ್ಪ ಬಸಲಿಂಗಪ್ಪ ತಗಾರೆ, ಜಗನ್ನಾಥರೆಡ್ಡಿ ರಾಜರೆಡ್ಡಿ, ಸಂಜಯಸಿಂಗ್ ಬಾಬುಸಿಂಗ್ ಹಜಾರೆ, ಶರಣಪ್ಪ ಶಿವಪ್ಪ ಕನ್ನಾಳೆ, ಮಹ್ಮದ್ ಸಲಿಮೊದ್ದೀನ್ ಮಹ್ಮದ್ ನಿಜಾಮೊದ್ದೀನ್, ಪರಮೇಶ್ವರ ವೈಜಿನಾಥ ಮುಗಟೆ, ಬಸವರಾಜ ಶಾಮಣ್ಣ, ಹಣಮಂತರಾವ್ ಕಾಶೀನಾಥ ರಾವ್ ಪಾಟೀಲ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.