ಔರಾದ್: ತಾಲ್ಲೂಕಿನ ನಾಗಮಾರಪಳ್ಳಿ-ನಂದ್ಯಾಳ ನಡುವೆ ಇರುವ ಬ್ಯಾರೇಜ್ನಲ್ಲಿ ಗುರುವಾರ ಸಂಜೆ ತಾಯಿ ಮತ್ತು ಇಬ್ಬರು ಮಕ್ಕಳು ಆಕಸ್ಮಿಕವಾಗಿ ಮುಳುಗಿ ಮೃತಪಟ್ಟಿದ್ದಾರೆ.
ರೆಬಿಕಾ ಯೇಶಪ್ಪ (28), ವಿಲ್ಸನ್ ಯೇಶಪ್ಪ (4), ಶ್ಯಾಮ್ಸನ್ ಯೇಶಪ್ಪ (2) ಮೃತಪಟ್ಟವರು.
ನಂದ್ಯಾಳದ ರೆಬಿಕಾ ಯೇಶಪ್ಪ ತಮ್ಮ ಅತ್ತೆ ಮತ್ತು ಮಕ್ಕಳ ಜೊತೆ ಹೊಲದಲ್ಲಿ ಕೆಲಸ ಮುಗಿಸಿ ವಾಪಸ್ ಮನೆಗೆ ಹೋಗುತ್ತಿದ್ದರು. ಈ ಸಂದರ್ಭದಲ್ಲಿ ಹಿರಿಯ ಪುತ್ರ ವಿಲ್ಸನ್ ಕಾಲು ಜಾರಿ ಬ್ಯಾರೇಜ್ನಲ್ಲಿ ಬಿದ್ದಿದ್ದಾನೆ. ಆಗ ರೆಬಿಕಾ ಮತ್ತೊಬ್ಬ ಮಗನೊಂದಿಗೆ ಆತನನ್ನು ರಕ್ಷಿಸಲು ಹೋದಾಗ ಈ ಅವಘಡ ಸಂಭವಿಸಿದೆ. ಪೊಲೀಸರು ಗ್ರಾಮಸ್ಥರ ಸಹಾಯದಿಂದ ತಡರಾತ್ರಿ ವರೆಗೆ ಕಾರ್ಯಾಚರಣೆ ನಡೆಸಿ ಶವಗಳನ್ನು ಹೊರಕ್ಕೆ ತೆಗೆದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.