ADVERTISEMENT

ಬಸವಕಲ್ಯಾಣ; ಬಾಲಕಿಯ ಮದುವೆ ರದ್ದು

​ಪ್ರಜಾವಾಣಿ ವಾರ್ತೆ
Published 26 ಮೇ 2022, 2:57 IST
Last Updated 26 ಮೇ 2022, 2:57 IST

ಬಸವಕಲ್ಯಾಣ: ನಗರದಲ್ಲಿ ಬುಧವಾರ ಬಾಲಕಿಯೊಂದಿಗೆ ನಡೆಯುತ್ತಿದ್ದ ಮದುವೆಯನ್ನು ಜಿಲ್ಲಾ ಮಕ್ಕಳ‌ ರಕ್ಷಣಾಧಿಕಾರಿಗಳ ತಂಡ ತಡೆದಿದೆ.

ನಗರದ ಹಿಂಗುಲಾಂಬಿಕಾ ದೇವ ಸ್ಥಾನ ದಲ್ಲಿ ಮದುವೆಗಾಗಿ ಸಿದ್ಧತೆ ನಡೆ ದಿತ್ತು. ಶಹಾಪುರ ಓಣಿಯ 24 ವರ್ಷದ ಯುವಕನ ಮದುವೆ ಮಹಾರಾಷ್ಟ್ರದ ನಿಲಂಗಾ ತಾಲ್ಲೂಕಿನ 16 ವರ್ಷದ ಬಾಲಕಿಯೊಂದಿಗೆ ನಡೆಯುವುದಿತ್ತು.

ಪೊಲೀಸರು, ಮಹಿಳಾ ಮತ್ತು ಮಕ್ಕಳ‌ ಕಲ್ಯಾಣಾಧಿ ಕಾರಿಗಳು ಸ್ಥಳಕ್ಕೆ ಬಂದು ರದ್ದು ಗೊಳಿಸಿದರು. ‘ನಿಗದಿತ ವಯಸ್ಸು ಆಗುವ ವರೆಗೆ ಮದುವೆ ಮಾಡುವುದಿಲ್ಲ ಎಂದು ಪಾಲಕರಿಂದ ಮುಚ್ಚಳಿಕೆ ಪತ್ರ ಬರೆದುಕೊಳ್ಳಲಾಯಿತು’ ಎಂದು ಅಧಿ ಕಾರಿಗಳು ತಿಳಿಸಿದ್ದಾರೆ. ಮಕ್ಕಳ ರಕ್ಷಣಾ ಘಟಕದ ಸಹಾಯ ವಾಣಿ ಜಿಲ್ಲಾ ಧಿಕಾರಿ ವಿನೋದ ಕುರೆ, ಸಿಡಿಪಿಒ ಶ್ರೀಕಾಂತ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.