ಹುಲಸೂರ: ಪಟ್ಟಣದ ಹೊರ ವಲಯದಲ್ಲಿರುವ ಸಂತ ಆಂಥೋನಿ ಚರ್ಚ್ನಲ್ಲಿ ಕ್ರಿಸ್ಮಸ್ ಆಚರಿಸಲಾಯಿತು.
ಎರಡು ದಿನ ವಿವಿಧ ಕಾರ್ಯಕ್ರಮಗಳು ನಡೆದವು.
ಸಂತ ಆಂಥೋನಿ ಕಾಲೊನಿ ನಿವಾಸಿಗಳು ಮೋಂಬತ್ತಿ ಹಿಡಿದು ಚರ್ಚ್ಗೆ ತೆರಳಿ ಯೇಸುವನ್ನು ಆರಾಧಿಸಿದರು.
ಫಾದರ್ ಸುನೀಲ ಮಾನಕೇರೆ ಅವರು ಪ್ರಾರ್ಥನೆ ಬೋಧಿಸಿದರು. ಬಳಿಕ ಸಿಹಿ ಹಂಚಿ ಸಂಭ್ರಮಿಸಲಾಯಿತು.
ರಣಜಿತ್ ಗಾಯಕವಾಡ, ಅರವಿಂದ ಹರಿಪಲ್ಲೆ, ವಿದ್ಯಾಸಾಗರ ಬನಸೂಡೆ, ದೀಪಕ್ ಹಾಗೂ ಸಿಸ್ಟರ್ಸ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.