ADVERTISEMENT

ಬೀದರ್: ಸಂವಿಧಾನ ಪೀಠಿಕೆ ವಿತರಣೆ ಕಾರ್ಯಕ್ರಮ 

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2022, 13:37 IST
Last Updated 5 ಅಕ್ಟೋಬರ್ 2022, 13:37 IST
ಬೀದರ್‌ನ ಬ್ಯಾಂಕರ್ಸ್ ಕಾಲೊನಿ ಕಲ್ಲಪ್ಪ ವೈದ್ಯ ನಿವಾಸದಲ್ಲಿ ಮನೆ ಮನೆಗೆ ಸಂವಿಧಾನ ಕಾರ್ಯಕ್ರಮ ನಡೆಯಿತು
ಬೀದರ್‌ನ ಬ್ಯಾಂಕರ್ಸ್ ಕಾಲೊನಿ ಕಲ್ಲಪ್ಪ ವೈದ್ಯ ನಿವಾಸದಲ್ಲಿ ಮನೆ ಮನೆಗೆ ಸಂವಿಧಾನ ಕಾರ್ಯಕ್ರಮ ನಡೆಯಿತು   

ಬೀದರ್: ಸಾಹಿತ್ಯ ರತ್ನ ಅಣ್ಣಾಭಾವು ಸಾಠೆ ಸಾಂಸ್ಕೃತಿಕ ಹಾಗೂ ಸಾಹಿತ್ತಿಕ ಲೋಕಮಂಚ್ ಟ್ರಸ್ಟ್ ವತಿಯಿಂದ ನಗರದ ಬ್ಯಾಂಕರ್ಸ್ ಕಾಲೊನಿಯ ನಿವೃತ್ತ ಬ್ಯಾಂಕ್ ವ್ಯವಸ್ಥಾಪಕ ಕಲ್ಲಪ್ಪ ವೈದ್ಯ ಅವರ ನಿವಾಸದಲ್ಲಿ ‘ಮನೆ ಮನೆಗೆ ಸಂವಿಧಾನ ಹಾಗೂ ಸಾಧಕರೊಂದಿಗೆ ಸಂವಾದ’ ಕಾರ್ಯಕ್ರಮ ನಡೆಯಿತು.

ರೆಡ್‍ಕ್ರಾಸ್ ಸಂಸ್ಥೆಯ ಅಧ್ಯಕ್ಷ ಡಾ. ಸಿ. ಆನಂದರಾವ್‌ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಎಸ್‌ಬಿಐ ನಿವೃತ್ತ ಮುಖ್ಯ ವ್ಯವಸ್ಥಾಪಕ ಕಲ್ಲಪ್ಪ ವೈದ್ಯ ಭಾಗವಹಿಸಿದ್ದರು. ಟ್ರಸ್ಟ್‌ ಅಧ್ಯಕ್ಷ ಎಂ.ಎಸ್. ಮನೋಹರ ಅಧ್ಯಕ್ಷತೆ ವಹಿಸಿದ್ದರು.

ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಉಪನ್ಯಾಸಕ ಮನೋಹರ ಜಿ. ಮೇತ್ರೆ, ಚಿಟಗುಪ್ಪದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಜೈಭಾರತ ಮಂಗೇಶಕರ್ ಸಂವಾದ ನಡೆಸಿದರು.

ADVERTISEMENT

ಜೆಸ್ಕಾಂನ ಲೆಕ್ಕಾಧಿಕಾರಿ ಸುಮಂತ ಕಟ್ಟಿಮನಿ ಪ್ರಾಸ್ತವಿಕವಾಗಿ ಮಾತನಾಡಿದರು. ರಾಘವೇಂದ್ರ ಮುತ್ತಂಗಿ ನಿರೂಪಿಸಿದರು. ಪ್ರವೀಣಚಂದ್ರ ಮಿರಾಗಂಜ್‍ಕರ್ ಸ್ವಾಗತಿಸಿದರು. ಮನೋಹರ ಮಿರ್ಜಾಪುರಕರ್ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.