ADVERTISEMENT

ಬಸ್‌ ಚಾಲಕನ ಮೇಲೆ ಹಲ್ಲೆ

​ಪ್ರಜಾವಾಣಿ ವಾರ್ತೆ
Published 22 ಜನವರಿ 2022, 5:00 IST
Last Updated 22 ಜನವರಿ 2022, 5:00 IST

ಔರಾದ್: ಸಾರಿಗೆ ಸಂಸ್ಥೆಯ ಇಲ್ಲಿನ ಘಟಕದ ಚಾಲಕ ಬಾಪುರಾವ್ ಅವರ ಮೇಲೆ ಪ್ರಯಾಣಿಕನೊಬ್ಬ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ.
ಮುರ್ಕಿ ತಾಂಡಾದ ಸಂದೀಪ್ ರಾಠೋಡ್ ಹಲ್ಲೆ ನಡೆಸಿದ ಪ್ರಯಾಣಿಕ. ಉದಗೀರನಿಂದ ಔರಾದ್ ಕಡೆ ಬರುತ್ತಿರುವ ಬಸ್‌ಗೆ ಪ್ರಯಾಣಿಕ ಸಂದೀಪ್ ಮುರ್ಕಿ ಗ್ರಾಮದಲ್ಲಿ ಹತ್ತಿದ್ದಾನೆ. ಇನ್ನು ‌ಮಾಳೆಗಾಂವ್ ಮುಂದೆ ಇರುವಾಗ ಬಸ್ ನಿಲ್ಲಿಸಲು ಹೇಳಿದ್ದಾನೆ. ನಡುವೆ ಬಸ್ ನಿಲ್ಲಸಲಾಗದು. ಮಾಳೆಗಾಂವ್ ನಿಲ್ದಾಣದ ಹತ್ತಿರ ಇಳಿದುಕೊಳ್ಳಿ ಎಂದು ಚಾಲಕ ಬಾಪುರಾವ ಹೇಳಿದ್ದಾರೆ. ಇದರಿಂದ ಸಿಟ್ಟಿಗೆದ್ದು ಚಾಲಕನ ಮೇಲೆ ಹಲ್ಲೆ ನಡೆಸಲಾಗಿದೆ.

ಗಾಯಾಳುವನ್ನು ಚಿಕಿತ್ಸೆಗಾಗಿ ಉದಗೀರ್ ಆಸ್ಪತ್ರೆಗೆ ಕಳುಹಿಸಲಾಗಿದೆ. ಈ ಕುರಿತು ಹೊಕ್ರಾಣಾ ಠಾಣೆಗೆ ದೂರು ನೀಡಲಾಗಿದೆ ಎಂದು ಘಟಕ ವ್ಯವಸ್ಥಾಪಕ ಎಂ.ಡಿ. ನಯೀಮ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT