ADVERTISEMENT

ಸಚಿವರಿಂದ ಬೆಳೆ ಹಾನಿ ಪರಿಶೀಲನೆ ಇಂದು

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2020, 16:56 IST
Last Updated 7 ಅಕ್ಟೋಬರ್ 2020, 16:56 IST

ಬೀದರ್: ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್ ಅವರು ಅಕ್ಟೋಬರ್ 8ರಂದು ಜಿಲ್ಲೆಯ ಕೋಳಾರ, ಆಣದೂರು, ಹಲಬರ್ಗಾ, ಹೊಳಸಮುದ್ರ, ಡಿಗ್ಗಿ ಹಾಗೂ ಕಮಲನಗರಕ್ಕೆ ಭೇಟಿ ನೀಡಿ ಅತಿವೃಷ್ಟಿಯಿಂದ ಆಗಿರುವ ಬೆಳೆಹಾನಿಯನ್ನು ಪರಿಶೀಲಿಸುವರು.

ಬೆಳಿಗ್ಗೆ 9ಕ್ಕೆ ಬೋಂತಿಯಿಂದ ರಸ್ತೆ ಮಾರ್ಗವಾಗಿ ಬೀದರ್‍ಗೆ ಬರುವರು. ಬೆಳಿಗ್ಗೆ 11.30ಕ್ಕೆ ಈಚೆಗೆ ನಿಧನರಾದ ಜಿಲ್ಲಾ ಪಂಚಾಯಿತಿ ಸದಸ್ಯ ಅನಿಲ್ ಗುಂಡಪ್ಪ ಅವರ ಮನೆಗೆ ಭೇಟಿ ನೀಡುವರು.

ಮಧ್ಯಾಹ್ನ 12ಕ್ಕೆ ಕೋಳಾರ, ಮಧ್ಯಾಹ್ನ 12.30ಕ್ಕೆ ಆಣದೂರು, ಮಧ್ಯಾಹ್ನ 1.30ಕ್ಕೆ ಹಲಬರ್ಗಾ, ಮಧ್ಯಾಹ್ನ 2.30ಕ್ಕೆ ಹೊಳಸಮುದ್ರ, ಮಧ್ಯಾಹ್ನ 3.30ಕ್ಕೆ ಡಿಗ್ಗಿ ಹಾಗೂ ಸಂಜೆ 4.30ಕ್ಕೆ ಕಮಲನಗರಕ್ಕೆ ಭೇಟಿ ನೀಡಿ ಬೆಳೆ ಪರಿಶೀಲಿಸುವರು.

ADVERTISEMENT

ಸಂಜೆ 5.30ಕ್ಕೆ ಕಮಲನಗರದಿಂದ ಉದಗೀರಕ್ಕೆ ಪ್ರಯಾಣಿಸಿ ಸ್ಥಳೀಯ ಕಾರ್ಯಕ್ರಮಗಳಲ್ಲಿ ಭಾಗವಹಿಸುವರು. ಸಂಜೆ 6ಕ್ಕೆ ಉದಗೀರನಿಂದ ರಸ್ತೆ ಮೂಲಕ ಬೋಂತಿ ತಾಂಡಾಕ್ಕೆ ತೆರಳಿ ವಾಸ್ತವ್ಯ ಮಾಡುವರು ಎಂದು ಸಚಿವರ ವಿಶೇಷ ಕರ್ತವ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.