ADVERTISEMENT

ಮನ ರಂಜಿಸಿದ ಸಾಂಸ್ಕೃತಿಕ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2021, 14:31 IST
Last Updated 29 ನವೆಂಬರ್ 2021, 14:31 IST
ಬೀದರ್ ತಾಲ್ಲೂಕಿನ ಫತೇಪುರದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕಲಾವಿದ ವಿಶ್ವನಾಥ ಗುಣಶೆಟ್ಟಿ ಗಾಯನ ಪ್ರಸ್ತುತಪಡಿಸಿದರು
ಬೀದರ್ ತಾಲ್ಲೂಕಿನ ಫತೇಪುರದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕಲಾವಿದ ವಿಶ್ವನಾಥ ಗುಣಶೆಟ್ಟಿ ಗಾಯನ ಪ್ರಸ್ತುತಪಡಿಸಿದರು   

ಜನವಾಡ: ಬೀದರ್ ತಾಲ್ಲೂಕಿನ ಫತೇಪುರದ ಶಾಂತಲಿಂಗ ಶಿವಯೋಗಿ ದೇವಸ್ಥಾನದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಾಮಾನ್ಯ ಯೋಜನೆಯಡಿ ಆಯೋಜಿಸಿದ್ದ ಸಾಂಸ್ಕøತಿಕ ಕಾರ್ಯಕ್ರಮ ಸಭಿಕರ ಮನ ರಂಜಿಸಿತು.

ಕಲಾವಿದ ವಿಶ್ವನಾಥ ಗುಣಶೆಟ್ಟೆ ಅವರು ಜಾನಪದ, ಭಕ್ತಿ ಹಾಗೂ ಭಾವಗೀತೆಗಳನ್ನು ಸುಮಧುರವಾಗಿ ಹಾಡಿದರು.

ಉದ್ಘಾಟನೆ ನೆರವೇರಿಸಿದ ಪ್ರಮುಖರಾದ ಶಿವಬಸಪ್ಪ ಪಾಟೀಲ ಅವರು, ಜಾನಪದ ಕಲೆ ಹಾಗೂ ಸಂಸ್ಕೃತಿ ಉಳಿವಿಗೆ ಪೂರಕವಾದ ಚಟುವಟಿಕೆಗಳು ನಿರಂತರ ನಡೆಯಬೇಕು ಎಂದು ಹೇಳಿದರು.

ADVERTISEMENT

ನರಸಿಂಗರಾವ್ ಸುತಾರ್ ಅಧ್ಯಕ್ಷತೆ ವಹಿಸಿದ್ದರು. ರಾಜು ಸ್ವಾಮಿ, ವಿಶ್ವನಾಥ ಹಣಮಂತ ನಾವದಗೇರಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.