ADVERTISEMENT

ದಿಲೀಪ ಕಮಠಾಣೆಗೆ ಸನ್ಮಾನ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2020, 12:39 IST
Last Updated 4 ಡಿಸೆಂಬರ್ 2020, 12:39 IST
ಬೀದರ್‌ನಲ್ಲಿ ಜೈ ಕರ್ನಾಟಕ ರಕ್ಷಣ ವೇದಿಕೆ ಮತ್ತು ಸ್ನೇಹಾ ಕಲ್ಚರಲ್ ಸೋಶಿಯಲ್ ಡೆವೆಲಪ್‌ಮೆಂಟ್ ವತಿಯಿಂದ ಬಸವ ತತ್ವ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ. ದಿಲೀಪ ಕಮಠಾಣೆ ಅವರನ್ನು ಸನ್ಮಾನಿಸಲಾಯಿತು
ಬೀದರ್‌ನಲ್ಲಿ ಜೈ ಕರ್ನಾಟಕ ರಕ್ಷಣ ವೇದಿಕೆ ಮತ್ತು ಸ್ನೇಹಾ ಕಲ್ಚರಲ್ ಸೋಶಿಯಲ್ ಡೆವೆಲಪ್‌ಮೆಂಟ್ ವತಿಯಿಂದ ಬಸವ ತತ್ವ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ. ದಿಲೀಪ ಕಮಠಾಣೆ ಅವರನ್ನು ಸನ್ಮಾನಿಸಲಾಯಿತು   

ಬೀದರ್: ಜೈ ಕರ್ನಾಟಕ ರಕ್ಷಣ ವೇದಿಕೆ ಹಾಗೂ ಸ್ನೇಹಾ ಕಲ್ಚರಲ್ ಸೋಶಿಯಲ್ ಡೆವೆಲಪ್‌ಮೆಂಟ್ ವತಿಯಿಂದ 65ನೇ ವರ್ಷದ ಕನ್ನಡ ರಾಜ್ಯೋತ್ಸವ ಅಂಗವಾಗಿ ಬಸವ ತತ್ವ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ದಿಲೀಪ ಕಮಠಾಣೆ ಅವರನ್ನು ಸನ್ಮಾನಿಸಲಾಯಿತು.

ಜೈ ಕರ್ನಾಟಕ ರಕ್ಷಣ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ಶ್ರೀಮತ ಸಪಾಟೆ ಅವರು ದಿಲೀಪ ಕಮಠಾಣೆ ಅವರಿಗೆ ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಿದರು.

ಬಿಜೆಪಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಜಯಕುಮಾರ ಕಾಂಗೆ, ಚನ್ನಬಸವ ಪಟ್ಟದ್ದೇವರು ವಿದ್ಯಾನಗರ ಕಾಲೊನಿ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಶಿವಕುಮಾರ ಭಾಲ್ಕೆ, ಲಕ್ಷ್ಮಬಾಯಿ ಕಮಠಾಣೆ ಬಿ.ಇಡಿ. ಪ್ರಾಚಾರ್ಯೆ ಧನರಾಜ ಪಾಟೀಲ, ವಿ.ಕೆ.ಇಂಟರ್‌ನ್ಯಾಷನಲ್ ಪ್ರಾಚಾರ್ಯೆ ಶಿವಲೀಲಾ ಟೊಣ್ಣೆ, ಉಪ ಪ್ರಾಚಾರ್ಯ ನಾಗೇಶ ಬಿರಾದರ, ಉಪನ್ಯಾಸಕರಾದ ವೀರೇಂದ್ರ ಜಿಂದೆ, ಆಡಳಿತಾಧಿಕಾರಿ ಜೀಮ್ಸ್‌ ಧಾಮಸ್, ಮುಖ್ಯ ಶಿಕ್ಷಕ ರವೀಂದ್ರ, ಪ್ರದೀಪ ಗಾಜುಲ್, ಝರೆಪ್ಪ ಹೊಸಳ್ಳಿ, ಪ್ರಿಯಂಕಾ ಕುದರೆ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.