ADVERTISEMENT

‘ಸಮರ್ಪಕವಾಗಿ ಪಡಿತರ ಧಾನ್ಯ ವಿತರಿಸಿ’

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2020, 13:56 IST
Last Updated 12 ಸೆಪ್ಟೆಂಬರ್ 2020, 13:56 IST
ಭಾರತ ಸರ್ಕಾರ ಆಹಾರ ನಿಗಮದ ನೂತನ ಸದಸ್ಯ ಉಮೇಶ ಬಿರಬಿರ್ಟೆ ಅವರನ್ನು ಸನ್ಮಾನಿಸಲಾಯಿತು
ಭಾರತ ಸರ್ಕಾರ ಆಹಾರ ನಿಗಮದ ನೂತನ ಸದಸ್ಯ ಉಮೇಶ ಬಿರಬಿರ್ಟೆ ಅವರನ್ನು ಸನ್ಮಾನಿಸಲಾಯಿತು   

ಹುಮನಾಬಾದ್: ಬೀದರ್‌ ಜಿಲ್ಲೆಯಲ್ಲಿರುವ ಪಡಿತರ ವಿತರಕರು ಬಡವರಿಗೆ ಸಮಸ್ಯೆಯಾಗದಂತೆ ಸಮರ್ಪಕವಾಗಿ ಪಡಿತರ ಧಾನ್ಯ ವಿತರಿಸಬೇಕು ಎಂದು ಭಾರತ ಸರ್ಕಾರ ಆಹಾರ ನಿಗಮದ ನೂತನ ಸದಸ್ಯ ಉಮೇಶ ಬಿರಬಿರ್ಟೆ ಅಟ್ಟೂರ್ ಸೂಚಿಸಿದರು.

ಜಯ ಕರ್ನಾಟಕ ಸಂಘಟನೆಯಿಂದ ಶುಕ್ರವಾರ ಆಯೋಜಿಸಲಾಗಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಶಾಲೆಗಳಿಗೆ ಆಹಾರ ಪೂರೈಕೆ ಹಾಗೂ ಪಡಿತರ ಧಾನ್ಯ ವಿತರಣೆಯಲ್ಲಿ ಗುಣಮಟ್ಟಕ್ಕೆ ಸಂಬಂಧಿಸಿದಂತೆ ದೂರಗಳಿದ್ದರೆ ಕೂಡಲೇ ಮಾಹಿತಿ ನೀಡಬೇಕು. ಮುಲಾಜಿಲ್ಲದೆ ಕ್ರಮ ವಹಿಸುತ್ತೇನೆ ಎಂದು ತಿಳಿಸಿದರು.

ADVERTISEMENT

ಜಯ ಕರ್ನಾಟಕ ಸಂಘಟನೆ ನಾಡು ನುಡಿ ಜಲಕ್ಕಾಗಿ ಹೋರಾಟ ನಡೆಸಿಕೊಂಡು ಬರುವ ಮೂಲಕ ರಾಜ್ಯದಲ್ಲಿ ಹೆಸರು ವಾಸಿಯಾಗಿದೆ ಎಂದರು.

ಜಯ ಕರ್ನಾಟಕ ಸಂಘಟನೆ ತಾಲ್ಲೂಕು ಅಧ್ಯಕ್ಷ ನವೀನ ಬತಲಿ, ಸಂದೀಪ ಬತಲಿ, ರವಿ ಭಂಡಾರಿ, ಅವಿನಾಶ ಧುಮಾಳೆ, ಪ್ರವೀಣ ಗುತ್ತೆದಾರ, ರಾಜು ವಳಖೇನಡಿ, ಪವನ ಧುಮಾಳೆ, ಮಹೇಶ ಕಟ್ಟಿಮನಿ, ರಾಹುಲ ಪರಿಟ್, ಸೋಮು ಡಾಂಗೆ ಹಾಗೂ ಪವನ ಗಡವಂತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.