ಬೀದರ್: ಭರತ ಎಜುಕೇಶನ್ ಮತ್ತು ಚಾರಿಟಬಲ್ ಟ್ರಸ್ಟ್ ಹಾಗೂ ಭರತ ಆರ್ಟ್ ಗ್ಯಾಲರಿಯ ವತಿಯಿಂದ ಆನ್ಲೈನ್ ಮೂಲಕ ರಾಷ್ಟ್ರ ಮಟ್ಟದ ಎರಡನೇ ಚಿತ್ರಕಲಾ ಸರ್ಧೆ ಈಚೆಗೆ ನಡೆಯಿತು.
ಅತಿಥಿಗಳಾಗಿ ಹಿರಿಯ ಕಲಾವಿದ ಪ್ರಭಾಕರ, ಕಲಾವಿದರಾದ ಅನಿಲರಾಜ ದೊಡಮನಿ, ಜಾಶ್ವಾ ಅಜಯ, ರೊನಾಲ್ಡ್ ರೊನಿ, ವಸಂತ ಪಾಲ್ಗೊಂಡಿದ್ದರು.
ಆನ್ಲೈನ್ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತ ಕಲಾವಿದರಾದ ಜಸ್ಪ್ರೀತ್ ಮೋಹನಸಿಂಗ್, ಪ್ರಸಾದರಾವ್, ನಾಗರಾಜ ಕುಲಕರ್ಣಿ, ಛಾಯಾಕುಮಾರಿ, ನೌಶಿನ್ ಫಾತಿಮಾ, ಮೇರಿ ಶೈನಿ, ನವಮಿ, ಸ್ಮಿತಿ, ರೆಡ್ಸ್ನ್, ವಿಷ್ಣು ಪಿ. ಉಜ್ವಲ್. ಯು. ಪ್ರಥ್ವಿ ಕೆ. ಶ್ರೀಕೃಷ್ಣ ಎಸ್, ಯಶವಂತ, ರಾಮಚರಣ, ರವಿಕುಮಾರ, ವಿಷ್ಣು, ಝುಬಿಯಾ, ಶಿಬಾರಾಣಿ ಅವರಿಗೆ ಮಂಗಲಪೇಟೆಯ ರೋನಿ ಟುಟೊರಿಯಲ್ಸ್ನಲ್ಲಿ ಪ್ರಮಾಣಪತ್ರ ಪ್ರದಾನ ಮಾಡಲಾಯಿತು.
ಭರತ ಆರ್ಟ್ ಗ್ಯಾಲರಿಯ ಜೈಕುಮಾರ ಭಂಡೆ, ಇವ್ಯಂಜಲಿನ್ ಜೆ. ಆನಲೈನ್ ಮೂಲಕ ಚಿತ್ರಕಲಾ ಸ್ಪರ್ಧೆ ಆಯೋಜಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.