ADVERTISEMENT

ಅಲೆಮಾರಿಗಳಿಗೆ ಆಹಾರ ವಿತರಣೆ

​ಪ್ರಜಾವಾಣಿ ವಾರ್ತೆ
Published 18 ಮೇ 2021, 3:43 IST
Last Updated 18 ಮೇ 2021, 3:43 IST
ಬೀದರ್‌ನ ನೌಬಾದ್ ಆಟೊನಗರ ಸಮೀಪದ ಅಲೆಮಾರಿಗಳಿಗೆ ಸ್ನೇಹಾ ಕಲ್ಚರಲ್ ಫೌಂಡೇಶನ್ ಹಾಗೂ ಜಿಲ್ಲಾ ಸ್ವಯಂ ಸೇವಾ ಸಂಸ್ಥೆ ವತಿಯಿಂದ ಆಹಾರ ಪೊಟ್ಟಣ ವಿತರಿಸಲಾಯಿತು
ಬೀದರ್‌ನ ನೌಬಾದ್ ಆಟೊನಗರ ಸಮೀಪದ ಅಲೆಮಾರಿಗಳಿಗೆ ಸ್ನೇಹಾ ಕಲ್ಚರಲ್ ಫೌಂಡೇಶನ್ ಹಾಗೂ ಜಿಲ್ಲಾ ಸ್ವಯಂ ಸೇವಾ ಸಂಸ್ಥೆ ವತಿಯಿಂದ ಆಹಾರ ಪೊಟ್ಟಣ ವಿತರಿಸಲಾಯಿತು   

ಬೀದರ್: ಸ್ನೇಹಾ ಕಲ್ಚರಲ್ ಫೌಂಡೇಶನ್ ಹಾಗೂ ಜಿಲ್ಲಾ ಸ್ವಯಂ ಸೇವಾ ಸಂಸ್ಥೆ ವತಿಯಿಂದ ನೌಬಾದ್‍ನ ಆಟೊನಗರ ಸಮೀಪದ ಅಲೆಮಾರಿಗಳು, ವಡ್ಡರ ಕಾಲೊನಿಯ ಬಡವರು ಹಾಗೂ ನಗರದ ವಿವಿಧೆಡೆ ಕೋವಿಡ್ ವಾರಿಯರ್ಸ್‍ಗೆ ಉಚಿತ ಊಟದ ಪೊಟ್ಟಣ ಹಾಗೂ ನೀರಿನ ಬಾಟಲಿ ವಿತರಿಸಲಾಯಿತು.

ಜೈ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಶ್ರೀಮಂತ ಸಪಾಟೆ, ಪುನಿತ್ ಸಾಳೆ, ಸೌರಭ ಅಂಬೆಸಿಂಗಿ, ಅನೂಪ್ ಕುಲಕರ್ಣಿ, ಅಭಿಷೇಕ ರೆಡ್ಡಿ, ವೀರೇಶ ಸ್ವಾಮಿ ಹಾಜರಿದ್ದರು.

ಉಚಿತ ಆಹಾರ, ಹಣ್ಣು ವಿತರಣೆ

ADVERTISEMENT

ಜನವಾಡ: ಬೀದರ್ ತಾಲ್ಲೂಕಿನ ಚಟ್ನಳ್ಳಿ ಗ್ರಾಮದ ನವಜೀವನ ಕಾಲೊನಿಯ ಬಳಿ ಕುಷ್ಠರೋಗಿಗಳು ಹಾಗೂ ಬಡವರಿಗೆ ಉಚಿತ ಆಹಾರ ಹಾಗೂ ಬಾಳೆ ಹಣ್ಣು ವಿತರಿಸಲಾಯಿತು.

ಯುವ ಮುಖಂಡ ಚನ್ನಬಸವ ಬ್ಯಾಲಹಳ್ಳಿ, ಚನ್ನಬಸಯ್ಯ ಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.