ಬೀದರ್: 33 ಕೆವಿ ಬ್ಯಾಲಹಳ್ಳಿ, 33 ಕೆವಿ ಕಮಠಾಣ, 33 ಕೆವಿ ಸರ್ಕಲ್ ಕಚೇರಿ ಮತ್ತು 33 ಕೆವಿ ಸಾಯಿ ಲೈಫ್ ಸೈನ್ಸ್ ಸಬ್ ಸ್ಟೇಷನ್ ಮಾರ್ಗಗಳಲ್ಲಿ ತುರ್ತು ಕೆಲಸ ಇರುವ ನಿಮಿತ್ತ ಶನಿವಾರ (ನ.28) ವಿವಿಧೆಡೆ ವಿದ್ಯುತ್ ನಿಲುಗಡೆಯಾಗಲಿದೆ.
11 ಕೆವಿ ಭಾಲ್ಕಿ ವಾಟರ್ ಸಪ್ಲಾಯ್, ಕಣಜಿ ಐಪಿ ಮತ್ತು ಎನ್ಜೆವೈ, ಎಲ್ಐಎಸ್, ಮಳಚಾಪುರ ಎನ್ಜೆವೈ, ಹಾಲಹಳ್ಳಿ ಐಪಿ, ಸಂಗೋಳಗಿ ಐಪಿ, ಬ್ಯಾಲಹಳ್ಳಿ ಗ್ರಾಮೀಣ, 11 ಕೆವಿ ಜಮೀಸ್ತಾನಪುರ ಎನ್ಜೆವೈ, 11 ಕೆವಿ ಯದಲಾಪುರ ಐಪಿ, 11 ಕೆವಿ ಚಟ್ನಳ್ಳಿ ಐಪಿ, 11 ಕೆವಿ ಕಾಡವಾದ, 11 ಕೆವಿ ಜಿಲ್ಲಾಧಿಕಾರಿ ಕಚೇರಿ, 11 ಕೆವಿ ನೆಹರೂ ಕ್ರೀಡಾಂಗಣ, 11 ಕೆವಿ ಶಿವನಗರ ದಕ್ಷಿಣ ಮತ್ತು 33 ಕೆವಿ ಸಾಯಿ ಲೈಫ್ ಸೈನ್ಸ್ ಫೀಡರ್ ಮೇಲೆ ಬರುವ ಪ್ರದೇಶಗಳಲ್ಲಿ ಮಧ್ಯಾಹ್ನ 12 ಗಂಟೆಯಿಂದ ಸಂಜೆ 4 ಗಂಟೆ ವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಜೆಸ್ಕಾಂ ಬೀದರ್ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.