ಭಾಲ್ಕಿ (ಬೀದರ್ ಜಿಲ್ಲೆ): ತಾಲ್ಲೂಕಿನ ಹರನಾಳ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಹೊಲದಲ್ಲಿನ ಗುಡಿಸಲಿಗೆ ಬೆಂಕಿ ತಗುಲಿ ರೈತ ಜಗನ್ನಾಥ ರೇವಣಪ್ಪ ಹಲಗೆ (62) ಸಜೀವ ದಹನವಾಗಿದ್ದಾರೆ. ಅವರ ಜೊತೆಗಿದ್ದ ಮಾರುತಿ ಲಕ್ಷ್ಮಣ ಕುರಣೆ (65) ಅವರಿಗೆ ಗಾಯಗಳಾಗಿವೆ.
‘ಕಾಡುಹಂದಿಗಳಿಂದ ಜೋಳ ರಕ್ಷಿಸಲು ಜಮೀನಿನಲ್ಲಿ ಗುಡಿಸಲು ನಿರ್ಮಿಸಿದ್ದರು. ರಾತ್ರಿ ಇಬ್ಬರು ಅಡುಗೆ ಮಾಡಿದ್ದು, ಊಟ ಮಾಡಿ ನಿದ್ರೆಗೆ ಜಾರಿದ್ದಾರೆ. ಒಲೆಯಲ್ಲಿದ್ದ ಬೆಂಕಿ ಕಿಡಿ ರಾತ್ರಿ ಗುಡಿಸಲಿಗೆ ತಗುಲಿದೆ. ಮಾರುತಿ ಕುರಣೆ ಎಚ್ಚರಗೊಂಡಿದ್ದು, ಜಗನ್ನಾಥ ಅವರಿಗೆ ಎಚ್ಚರಗೊಳಿಸಲು ಯತ್ನಿಸಿದ್ದಾರೆ. ಆದರೆ, ಪ್ರಯೋಜನವಾಗಲಿಲ್ಲ’ ಎಂದು ಪೊಲೀಸರು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.