ಔರಾದ್: ತಾಲ್ಲೂಕಿನ ನಾಗೂರ (ಎಂ) ಗ್ರಾಮದ ರೈತ ಜ್ಞಾನೋಬಾ ಬಿರಾದಾರ ನಾಯಿಗಳಿಂದ ಜಿಂಕೆ ಮರಿಯನ್ನು ರಕ್ಷಿಸಿದ್ದಾರೆ.
ಭಾನುವಾರ ಸಂಜೆ ಆಹಾರ ಅರಸಿ ಬಂದ ಜಿಂಕೆಗಳ ಗುಂಪಿನ ಮೇಲೆ ನಾಯಿ ಹಿಂಡು ದಾಳಿ ಮಾಡಿದೆ. ನಾಲ್ಕು ಜಿಂಕೆಗಳು ತಪ್ಪಿಸಿಕೊಂಡು ಓಡಿ ಹೋಗಿವೆ. ಮರಿ ಜಿಂಕೆ ಅಲ್ಲೇ ಸಿಕ್ಕಿ ಬಿದ್ದಿದೆ. ಇದನ್ನು ಗಮನಿಸಿದ ರೈತ ಜ್ಞಾನೋಬಾ ನಾಯಿಗಳನ್ನು ಹೊಡೆದೊಡಿಸಿ ಜಿಂಕೆ ರಕ್ಷಣೆ ಮಾಡಿ ಅರಣ್ಯಾಧಿಕಾರಿಗಳಿಗೆ ಒಪ್ಪಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.