ADVERTISEMENT

ಭಾಲ್ಕಿ: ರೈತ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 15 ಜುಲೈ 2021, 5:13 IST
Last Updated 15 ಜುಲೈ 2021, 5:13 IST

ಭಾಲ್ಕಿ: ತಾಲ್ಲೂಕಿನ ಹಲಬರ್ಗಾ ಗ್ರಾಮದಲ್ಲಿ ಬುಧವಾರ ರೈತ ಸತೀಶ ಮಲ್ಲಿಕಾರ್ಜುನ ಪ್ರಭಾ (31) ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

‘ತಂದೆ ಮಲ್ಲಿಕಾರ್ಜುನ ಹೆಸರಿನ ಜಮೀನಿನಲ್ಲಿ ಕೃಷಿ ಮಾಡುತ್ತಿದ್ದ ಸತೀಶ ಕೃಷಿ ಚಟುವಟಿಕೆ ನಿರ್ವಹಣೆಗಾಗಿ ಹಲಬರ್ಗಾ ಪಿಕೆಪಿಎಸ್ನಲ್ಲಿ ₹1 ಲಕ್ಷ ಹಾಗೂ ಖಾಸಗಿ ಸಾಲ ಮಾಡಿದ್ದಾರೆ. ಸಾಲ ತೀರಿಸುವ ಚಿಂತೆಯಲ್ಲಿ ಹೊಲದಲ್ಲಿನ ಮಾವಿನ ಮರಕ್ಕೆ ನೇಣು ಬೀಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂದು ಮೃತ ರೈತನ ಪತ್ನಿ ಜ್ಯೋತಿ ಸತೀಶ ನೀಡಿರುವ ದೂರಿನ ಮೇರೆಗೆ ಧನ್ನೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT