ADVERTISEMENT

ಬೀದರ್: ಗಾಂಧಿ ಜಯಂತಿ ಆಚರಣೆ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2022, 14:16 IST
Last Updated 8 ಅಕ್ಟೋಬರ್ 2022, 14:16 IST
ಬೀದರ್‌ನ ಕಿತ್ತೂರ ರಾಣಿ ಚನ್ನಮ್ಮ ಮಹಿಳಾ ಮಂಡಳ ವತಿಯಿಂದ ಸ್ವಧಾರ ಗೃಹದಲ್ಲಿ ಗಾಂಧಿ ಜಯಂತಿ ಆಚರಿಸಲಾಯಿತು
ಬೀದರ್‌ನ ಕಿತ್ತೂರ ರಾಣಿ ಚನ್ನಮ್ಮ ಮಹಿಳಾ ಮಂಡಳ ವತಿಯಿಂದ ಸ್ವಧಾರ ಗೃಹದಲ್ಲಿ ಗಾಂಧಿ ಜಯಂತಿ ಆಚರಿಸಲಾಯಿತು   

ಬೀದರ್: ನಗರದ ಗುಂಪಾ ರಸ್ತೆಯಲ್ಲಿರುವ ಕಿತ್ತೂರ ರಾಣಿ ಚನ್ನಮ್ಮ ಮಹಿಳಾ ಮಂಡಳ ವತಿಯಿಂದ ಸ್ವಧಾರ ಗೃಹದಲ್ಲಿ ಗಾಂಧಿ ಜಯಂತಿ ಆಚರಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಐಆರ್‌ಸಿಎ ಆಪ್ತ ಸಮಾಲೋಚಕ ಮನೋಹರ ಸಾಳಂಕೆ ಮಾತನಾಡಿ,‘ಗಾಂಧೀಜಿಯವರ ತತ್ವಗಳು ಹಾಗೂ ಆದರ್ಶಗಳು ಜಗತ್ತಿಗೆ ಮಾರ್ಗದರ್ಶಿಯಾಗಿವೆ. ಶಾಂತಿ, ಪ್ರೀತಿ, ಸಹಬಾಳ್ವೆಯಿಂದ ಉತ್ತಮ ರಾಷ್ಟ್ರ ನಿರ್ಮಾಣ ಮಾಡಬಹುದಾಗಿದೆ’ ಎಂದರು.

ಮುಖ್ಯ ಅತಿಥಿಯಾಗಿ ಸೈಯದ್‌ ಇಕ್ಬಾಲ್ ಪಾಷಾ ಪಟೇಲ್ ಭಾಗವಹಿಸಿದ್ದರು. ಸ್ವಧಾರ ಗ್ರಹದ ಮೇಲ್ವಿಚಾರಕಿ ಸವಿತಾ ವೆಂಕಟೇಶ, ಸ್ವಧಾರ ಗೃಹದ ಆಪ್ತ ಸಮಾಲೋಚಕಿ ವಿಲಾಸಸ್ಮತಿ ಸತೀಷ, ಸಾಂತ್ವಾನ ಕೇಂದ್ರದ ಆಪ್ತ ಸಮಾಲೋಚಕಿ ಗೀತಾ ಶ್ರೀಹರಿ ಹಾಗೂ ರೇಷ್ಮಾ ಬೇಗಂ ಇದ್ದರು. ಪೂಜಾ ವಂದಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.