ADVERTISEMENT

ಹಾಲಹಳ್ಳಿ | ಗಣೇಶ ಚತುರ್ಥಿ: ₹21 ಸಾವಿರಕ್ಕೆ ಲಡ್ಡು ಖರೀದಿ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2024, 14:32 IST
Last Updated 11 ಸೆಪ್ಟೆಂಬರ್ 2024, 14:32 IST
ಲಡ್ಡು ಖರೀದಿಸಿದ ರಾಜಕುಮಾರ್‌ಗೆ ಸನ್ಮಾನ
ಲಡ್ಡು ಖರೀದಿಸಿದ ರಾಜಕುಮಾರ್‌ಗೆ ಸನ್ಮಾನ   

ಖಟಕಚಿಂಚೋಳಿ: ಹಾಲಹಳ್ಳಿ ಕೆ. ಗ್ರಾಮದಲ್ಲಿ ಗಣೇಶ ಚತುರ್ಥಿಯ ವಿಸರ್ಜನೆಯ ದಿನವಾದ ಬುಧವಾರ ನಡೆದ ಗಣೇಶನ ಲಡ್ಡು ಹರಾಜಿನಲ್ಲಿ ಭಕ್ತರಾದ ರಾಜಕುಮಾರ ₹21 ಸಾವಿರಕ್ಕೆ ಲಡ್ಡು ಖರೀದಿಸಿದರು.

ಗ್ರಾಮದ ಮುಖ್ಯ ರಸ್ತೆ ಪಕ್ಕದ ಹನುಮಾನ ದೇವಸ್ಥಾನದ ಆವರಣದಲ್ಲಿ ಪ್ರತಿಪ್ಠಾಪಿಸಿದ ಗಣೇಶನ ವಿಗ್ರಹದ ಕೈಯಲ್ಲಿನ ಒಂದು ಕೆಜಿ ಲಡ್ಡು ಹರಾಜು ಮಾಡಲಾಯಿತು.

ಪ್ರಮುಖರಾದ ಗೋಪಾಲ ಕಲಾಲ, ರವಿ ಕಲಾಲ್, ಸುರೇಶ ಮಡಿವಾಳ, ದತ್ತು ಸ್ವಾಮಿ, ಅನಿಲ ಜೋತ್ರೆ, ರಾಮರೆಡ್ಡಿ, ಸುರೇಶ ಮಾಲಿಪಾಟೀಲ, ಶಿವಕುಮಾರ ಸದಾಶಿವ , ಸಂಜುಕುಮಾರ ಡೊಳ್ಳೆ, ಶಿವಕುಮಾರ ಖಾಶೆಂಪುರ, ಮಾಣಿಕ್ ಜಾಧವ್, ರಾಜಕುಮಾರ ಲಿಂಗಬಶೆಟ್ಟಿ ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.